ಸಿದ್ದಾಪುರದಲ್ಲಿ ಹರೀಶ ಎಸ್ ಗೌಡರ್ ಹರಳಿಕೊಪ್ಪ ಅವರ ಜನ್ಮದಿನಾಚರಣೆ

ಸಿದ್ದಾಪುರ :- ಸಮಾಜಕ್ಕೆ ನಮ್ಮಿಂದಾದ ಕಿಂಚಿತ್ತೂ ಕೊಡುಗೆ ನೀಡಬೇಕು ಎನ್ನುವದನ್ನು ಯುವಕರು ಮರೆತಂತಿದೆ. ಆದರೆ ಹರೀಶ ಗೌಡರ್ ತಮ್ಮ ಜನ್ಮದಿನದ ಆಚರಣೆಯನ್ನು ಇಂದಿನ ಯುವಕರಿಗೆ ಮಾದರಿಯಾಗುವಂತೆ ಆಚರಿಸಿದ್ದಾರೆ‌ ಎಂದು ಶಿಕ್ಷಣ ಪ್ರಸಾರಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಭೂಷಣ ಹೆಗಡೆ ಹೇಳಿದರು.


ಅವರು ಪಟ್ಟಣದ ಬಾಲಭವನದಲ್ಲಿ ನಡೆದ
ಹರೀಶ ಎಸ್ ಗೌಡರ್ ಹರಳಿಕೊಪ್ಪ ರವರ ಸ್ನೇಹಿತರ ಬಳಗದ ವತಿಯಿಂದ ಹರೀಶ್ ಗೌಡರ ರವರ ಜನ್ಮ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ನಾಲ್ಕೈದು ಜನರು ಸೇರಿ ಜನ್ಮದಿನಾಚರಣೆಯಲ್ಲಿ ಬೇಡವಾದುದಕ್ಕೆ ಹಣ ಖರ್ಚು ಮಾಡುವ ಇಂದಿನ ದಿನದಲ್ಲಿ ಸಾಧಕರಿಗೆ ಸನ್ಮಾನ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದು ಅರ್ಥಪೂರ್ಣ ವಾಗಿದೆ.
ಹರೀಶ್ ಗೌಡರ್ ಜೀವನದಲ್ಲಿ ಪರಿಪಕ್ವವಾಗಿದ್ದಾರೆ. ಹಿಂದೆ ಆದ ಕಹಿ ಘಟನೆಗಳು ನಿಮ್ಮನ್ನು ಎತ್ತರದ ಮಟ್ಟಕ್ಕೆ ಒಯ್ಯುತ್ತವೆ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿಗಳಾದ ಉಪೇಂದ್ರ ಪೈ ಶಿರಸಿ ಮಾತನಾಡಿ, ಇದು ಮನ ಮುಟ್ಟುವ, ಮನ ತಟ್ಟುವ ಕಾರ್ಯಕ್ರಮ. ಜನಪರ ಹೋರಾಟ ಮತ್ತು ಸಮಾಜದ ಸೇವೆ ಮಾಡುವುದರಲ್ಲಿ ಕಹಿ ಘಟಕಗಳು ಸಾಮಾನ್ಯ, ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ, ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು. ‌ನಿಮ್ಮ ನೋವು ಮುಂದಿನ ಜೀವನದ ಪಾಠ.
ದ್ವೇಷ ಮಾಡಲಿಕ್ಕೆ ನಾವು ಶಾಶ್ವತವಲ್ಲ. ನಿಮ್ಮಿಂದ ಜನಪರ ಕಾರ್ಯಕ್ರಮಗಳು ಆಗಲಿ ಎಂದು ಹಾರೈಸಿದರು.
ರೈತ ಮಖಂಡರು, ಸಮಾಜ ಸೇವಕರಾದ ವೀರಭದ್ರ ನಾಯ್ಕ ಮಳವಳ್ಳಿ, ಸಮಾಜಮುಖಿ ಸಂಪಾದಕರಾದ ಕನ್ನೇಶ ಕೋಲಸಿರ್ಸಿ, ಕನ್ನಡಪರ ಸಂಘಟನೆ ಗಳ ಒಕ್ಕೂಟದ ಅಧ್ಯಕ್ಷರಾದ ಆಕಾಶ ಎಸ್ ಕೊಂಡ್ಲಿ, ಸತೀಶ್ ಹೆಗಡೆ, ಹರೀಶ ಎಸ್ ಗೌಡರ್ ವೇದಿಕೆಯಲ್ಲಿ ಇದ್ದರು.
ಜಾನಪದ ಕಲಾವಿದೆ ಲಿಲಾವತಿ ಎಸ್ ಕೊಂಡ್ಲಿ, ಯೋಗಪಟು ಮಂಜುನಾಥ ಎಮ್ ನಾಯ್ಕ, ಕರಾಟೆ ಪಟುಗಳಾದ ಆನಂದ ನಾಯ್ಕ, ಅಜೀತ್ ಕೊಡಿಯಾ, ಜಯಂತ ನಾಯ್ಕ, ಚೆಸ್ ಚಾಂಪಿಯನ್ ಭರತ ಹೆಗಡೆ ದೊಡ್ಮನೆ, ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಗೀತಾ ನಾಯ್ಕ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಲೀಲಾವತಿ ಎಸ್ ಕೊಂಡ್ಲಿ ಪ್ರಾರ್ಥಿಸಿದರು.
ದಿನೇಶ್ ನಾಯ್ಕ ಸ್ವಾಗತಿಸಿದರು. ‌ ಗಣೇಶ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top