ಮಾಜಿ ಶಾಸಕ ಮಂಕಾಳ ವೈದ್ಯರ ಹೇಳಿಕೆ ವಿರುದ್ದ ಭಟ್ಕಳ ಬಿ.ಜೆ ಪಿ ಮಂಡಳದ ವತಿಯಿಂದ ಸುದ್ದಿಗೋಷ್ಟೀ

ಸುದ್ದಿಘೋಷ್ಟಿಯಲ್ಲಿ ಮಾಧ್ಯಮ ಪ್ರತಿನಿದಿಗಳ ನಿಷ್ಟೂರ ನಿಷ್ಪಕ್ಷಪಾತ ಪ್ರಶ್ನೇಗೆ ಬೆವತ್ತು ಬೆವರಿಹೋದ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ.

ಭಟ್ಕಳ : ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯರು ರಾಜಕಿಯವಾಗಿ ಹೇಳಿಕೆಯನ್ನು ನೀಡುತ್ತಿದ್ದಾರೆ ಇದು ಅಸಮಂಜಸ ಸುಳ್ಳು ಹೇಳಿಕೆಯಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು

ಅವರು ಭಟ್ಕಳ ಬಿಜೆಪಿ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಡಿಯನ್ನು ಉದ್ದೇಶಿಸಿ ಮಾತನಾಡುತ್ತ ಮಾಜಿ ಶಾಸಕ ಮಂಕಾಳ ವೈದ್ಯರು ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಅಸಮಂಜಸ ಹೇಳಿಕೆಯನ್ನು ಕೊಡುತ್ತಿದ್ದಾರೆ ಇದು ಸರಿಯಲ್ಲಾ ನಮ್ಮ ಬಿಜೆಪಿ ಪಕ್ಷದ ಸರಕಾರ ಸಮರ್ಥವಾಗಿ ಆಡಳಿತ ನಡೆಸುತ್ತಿದೆ ಇದರಲ್ಲಿ ಅನುಮಾನ ಬೇಡ ಎಂದು ಹೇಳಿದರು

ಈ ಬಗ್ಗೆ ಮಾಧ್ಯಮದವರು ಪ್ರಶ್ನೆಯನ್ನು ಮಾಡುತ್ತ ಪರೇಶ ಮೆಸ್ತಾ ಸಾವಿನ ಮರುತನಿಕೆ ಬಗ್ಗೆ ಮಾತನಾಡುವ ಶಾಸಕ ಸುನಿಲ್ ನಾಯ್ಕ ಚಿತ್ತರಂಜನ್ ತಿಮ್ಮಪ್ಪ ನಾಯ್ಕ ಹತ್ಯೆಯ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಬಿಜೆಪಿ ಸರಕಾರ ಎರಡು ಅವದಿಗೆ ಅಧಿಕಾರಕ್ಕೆ ಬಂದರೂ ಒಮ್ಮೆಯು ಕೂಡ ಈ ನಿಸ್ವಾರ್ಥ ಹಿಂದೂ ನಾಯಕರ ಹತ್ಯೆಯ ಬಗ್ಗೆ ಯಾಕೆ ದ್ವನಿ ಎತ್ತುತ್ತಿಲ್ಲಾ ಮಂಕಾಳ ವೈದ್ಯರ ಅವದಿಯಲ್ಲಿ ಸಾವಿರ ಕೊಟಿ ಅನುದಾನ ತಂದಿದ್ದೆನೆ ಎಂದು ಹೇಳಿದಾಗ ಮಾಜಿ ಮಂಡಲಾಧ್ಯಕ್ಷ ಭಟ್ಕಳ ಸಿಂಗಾಪುರವಾಗ ಬೇಕಿತ್ತು ಎಂದು ಹೇಳಿದ್ದರು ಆದರೆ ಈಗ ಹಾಲಿ ಶಾಸಕ ಸುನಿಲ್ ನಾಯ್ಕ ಸಾವಿರ ಕೊಟಿ ತಂದಿದ್ದೆನೆ ಎಂದು ಹೇಳುತ್ತಿದ್ದಾರೆ ಭಟ್ಕಳ ಸಿಂಗಾಪುರವಾಯಿತೆ ಹಾಲಿ ಶಾಸಕ ಸುನಿಲ್ ನಾಯ್ಕ ಮಾಜಿ ಶಾಸಕ ಮಂಕಾಳ ವೈದ್ಯರು ತಂದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಬೀಗುತ್ತಿದ್ದ ಎಂದು ಮಾಧ್ಯಮದವರು ಪ್ರಶ್ನೇಗಳ ಸುರಿಮಳೆಯನ್ನೆ ಸುರಿಸಿದರು ಸುದ್ದಿಗೊಷ್ಟಿಯಲ್ಲಿ ಮಾದ್ಯಮದ ಪ್ರಶ್ನೆಗೆ ಪತ್ರಿಕಾಗೊಷ್ಟೀಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗರು ಕಕ್ಕಾಬಿಕ್ಕಿಯಾಗಿ ಬೆವರು ಸುರಿಸಿರುವ ಘಟನೆ ನಡೆದಿದೆ.

ಈ ಸಂದರ್ಬದಲ್ಲಿ ಬಿಜೆಪಿ ಮುಖಂಡರಾದ ಬಾಸ್ಕರ್ ದೈಮನೆ, ಮೋಹನ್ ನಾಯ್ಕ ಶ್ರೀಕಾಂತ ನಾಯ್ಕ , ದಿನೇಶ ನಾಯ್ಕ ವೆಂಕಟೇಶ ನಾಯ್ಕ ಪಾಂಡುರಂಗ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top