ಲೋಕಾ ಸಮಸ್ತ ಸುಖಿನೋ ಭವಂತು ಮಾಜಿ ಶಾಸಕ ಮಂಕಾಳ ವೈದ್ಯ
ಭಟ್ಕಳ : ತಾಲೂಕಿನ ಪ್ರತಿಷ್ಟೀತ ಹಣಕಾಸು ಸಂಸ್ಥೆಯಾದ ಸರ್ಪನಕಟ್ಟೆ ಮಹಾಗಣಪತಿ ಮಹಾಸತಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಐದನೇ ಶಾಖೆ ಮುರ್ಡೆಶ್ವರದ ಗೌರಿಶಂಕರ್ ಕಾಂಪ್ಲೇಕ್ಸ ಒಂದರಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಉದ್ಗಾಟಿಸಿದರು.
ಶಾಖೆಯನ್ನು ಉದ್ಗಾಟಿಸಿ ಮಾತನಾಡಿದ ಅವರು ಲೋಕಾ ಸಮಸ್ತ ಸುಖಿನೋ ಭವಂತು ನಾವು ಯಾವಾಗಲು ಇನ್ನೊಬ್ಬರ ಒಳಿತನ್ನೆ ಬಯಸಬೇಕು ಸಾಧ್ಯವಾದರೆ ದೀನ ದಲಿತರ ಕಣ್ಣೊರೆಸುವ ಕೆಲಸ ಮಾಡಬೇಕು ಮುಂದಿನ ದಿನಗಳಲ್ಲಿ ಈ ಸಂಸ್ಥೆ ಕೂಡಾ ಅಂತಹ ಕೆಲಸವನ್ನೆ ಮಾಡುವಂತಾಗಲಿ ಎಂದು ಆಶಿಸಿದರು
ಈ ಸಂದರ್ಬದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಈರಪ್ಪ ಗರ್ಡಿಕರ್ ಮಾತನಾಡಿ ನಮ್ಮ ಸಂಸ್ಥೆಯ ಐದನೆ ಶಾಖೆ ಇಂದು ಉದ್ಗಾಟನೆ ಆಗಿದೆ ಎಲ್ಲರ ಸಹಕಾರ ನಮ್ಮ ಸಂಸ್ಥೆಯ ಮೇಲಿರಲ್ಲಿ ಎಂದು ಹೇಳಿದರು
ಈ ಸಂದರ್ಬದಲ್ಲಿ ಎಂ ಆರ್ ನಾಯ್ಕ, ಪ್ರಕಾಶ್ ನಾಯ್ಕ ಸಿಮಾ ಲ್ಯಾಬ್, ಅಣ್ಣಪ್ಪ ನಾಯ್ಕ ಚೌತನಿ ಸಂಸ್ಥೆಯ ಮುಖ್ಯಾಧಿಕಾರಿ ಕ್ರಷ್ಣ ನಾಯ್ಕ ಇನ್ನಿತರ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು