ರಾಜ್ಯ ಪರಿಶಿಷ್ಟ ಪಂಗಡ ಇಲಾಖಾ ರಾಜ್ಯ ನಿರ್ದೇಶಕ ರಾಜಕುಮಾರ್ ಅವರಿಂದ ಪರಿಶಿಷ್ಟರ ಕುಂದುಕೊರತೆ ಪರಿಶಿಲನೆ

ಅತಿ ಶಿಘ್ರದಲ್ಲಿ ಪರಿಶಿಷ್ಟರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ರಾಜಕುಮಾರ್

ಭಟ್ಕಳ: ರಾಜ್ಯ ಪರಿಶಿಷ್ಟ ಪಂಗಡ ಇಲಾಖಾ ನಿರ್ದೆಶಕರಾದ ರಾಜಕುಮಾರ್ ಅವರು ಭಟ್ಕಳ ತಾಲೂಕ ಕೊಟೆಶ್ವರ ಕೊರಗಾರ್ ಕೇರಿಗೆ ಬೇಟಿ ನೀಡಿ ಪರಿಶಿಷ್ಟರ ಕುಂದುಕೊರತೆಯನ್ನು ಆಲಿಸಿದರು ಹಾಗು ಯಾವುದೆ ಸಮಸ್ಯೆ ಇದ್ದರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂಬ ಬರವಸೆಯನ್ನು ನೀಡಿದರು.

ಈ ಸಂದರ್ಬದಲ್ಲಿ ಅವರು ಮಾತನಾಡಿ ಪರಿಶಿಷ್ಡ ಪಂಗಡದವರಿಗೆ ಅನೇಕ ಸಮಸ್ಯೆಗಳಿದ್ದು ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡವರ ಕೇರಿಗೆ ಬೇಟಿ ನೀಡಿ ದಲಿತರ ಕುಂದು ಕೊರತೆಯನ್ನು ಆಲಿಸಿ ಸಮಸ್ಯೆಯನ್ನು ಬಗೆ ಹರಿಸುವ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ದಲಿತ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ತುಳಸಿದಾಸ ಪಾವಸ್ಕರ್ ಮಾತನಾಡಿ ನಮ್ಮ ದಲಿತರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡದ ರಾಜ್ಯ ನಿರ್ದೇಶಕರಾದ ರಾಜಕುಮಾರ್ ಅವರು ಭಟ್ಕಳದ ದಲಿತರ ಕೇರಿಗೆ ಬೇಟಿ ನೀಡಿ ದಲಿತರ ಸಮಸ್ಯೆಯನ್ನು ಆಲಿಸಿದರು ಯಾವುದೆ ಸಮಸ್ಯೆ ಇದ್ದರು ಬಗೆ ಹರಿಸುವ ಬಗ್ಗೆ ಬರವಸೆಯನ್ನು ನಿಡಿದರು

ಈ ಸಂದರ್ಬದಲ್ಲಿ ಭಟ್ಕಳದ ಹೈಕೊರ್ಟ ನ್ಯಾಯವಾದಿಗಳಲ್ಲೊಬ್ಬರಾದ ರವೀಂದ್ರ ಸಮಾಜ ಕಲ್ಯಾಣ ಇಲಾಖೆಯ ಗೀತಾ ಭಟ್ಟ ಹಾಗು ದಲಿತ ಸಂಘಟನೆಯ ಮುಖಂಡರು ಮತ್ತು ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top