ಸ್ಥಳಕ್ಕೆ ಬೇಟಿ ನೀಡಿ ಸಾರ್ವಜನಿಕರಿಗೆ ದೈರ್ಯತುಂಬಿದ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ
ಭಟ್ಕಳ ತಾಲೂಕ ಕಡವಿನ ಕಟ್ಟೆಯ ಪ್ರದೇಶದಲ್ಲಿ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಅವರು ಸ್ಥಳಕ್ಕೆ ಬೇಟಿ ನೀಡಿ ಸ್ಥಳಿಯ ಸಾರ್ವಜನಿಕರಿಗೆ ದೈರ್ಯ ತುಂಬಿದ್ದು ಚಿರತೆ ಹಿಡಿಯುವ ಕಾರ್ಯ ನಾಳೆಯಿಂದ ನಡೆಸಲಾಗುವುದು ಎಂದು ಹೇಳಿದರು.
ಭಟ್ಕಳದ ಕಡವಿನಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷ ಆಗಿದ್ದು ಅಲ್ಲಿಯ ಜನರು ತುಂಬಾ ಭಯಬಿತರಾಗಿದ್ದಾರೆ ಚಿರತೆ ದಾಳಿಗೆ ಒಂದು ದನ ಬಲಿಯಾಗಿತ್ತು, ಅಲ್ಲಿಯ ಭಾಗದ ಜನರು ಮನೆ ಬಿಟ್ಟು ಹೊರಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿತ್ತು ಜನರಲ್ಲಿ ಬಾರಿ ಆತಂಕ ಹುಟ್ಟುಕೊಂಡಿದ್ದು ಇದನ್ನು ತಿಳಿದ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸoರಕ್ಷಣ ಕಾರ್ಯಪಡೆಯ ಸಮಿತಿಯ ಅಧ್ಯಕ್ಷರಾದ ಶ್ರೀ ಗೋವಿಂದ ನಾಯ್ಕ್ ಅವರು ಸ್ಥಳಕ್ಕೆ ಬೇಟಿ ನೀಡಿ ಅರಣ್ಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಪರಿಶೀಲನೆ ನಡೆಸಿ, ಮತ್ತು ಅಲ್ಲಿಯ ಜನರನ್ನು ಮಾತನಾಡಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಚಿರತೆ ಪಂಜರವನ್ನು ವ್ಯವಸ್ಥೆ ಮಾಡಿಸಿ ಚಿರತೆ ಹಿಡಿಯುವ ಕಾರ್ಯ ನಾಳೆಯಿಂದ ಪ್ರಾರಂಭ ಮಾಡುವಂತೆ ಅರಣ್ಯ ಅಧಿಕಾರಿಗಳು ಸೂಚನೆ ನೀಡಲಾಯಿತು.