ಭಟ್ಕಳ ತಾಲೂಕ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವತಿಯಿಂದ ಸುದ್ದಿಗೋಷ್ಟಿ

ಭಟ್ಕಳ ಪಿ ಎಲ್ ಡಿ ಭ್ಯಾಂಕ್ ಅಲ್ಲಿ ಭ್ರಷ್ಟಾಚಾರ ನಡೆದರು ಸಹಕಾರಿ ಇಲಾಖೆಯ ಅಧಿಕಾರಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಶಂಕರ್ ನಾಯ್ಕ ಬೆಟ್ಕೂರ್ ಆಕ್ರೋಶ

ಭಟ್ಕಳ: ತಾಲೂಕ ಪಿ ಎಲ್ ಡಿ ಭ್ಯಾಂಕ್ ಅಲ್ಲಿ ಸಿಬ್ಬಂದಿ ನೇಮಕಾತಿ ಇನ್ನಿತರ ವಿಷಯದಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಭಿತಾದಂತಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆದೇಶವಿದ್ದರು ಕೂಡ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲಾ ಸಹಕಾರಿ ಇಲಾಖೆಯ ಅಧಿಕಾರಿಗಳು ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಶಂಕರ್ ನಾಯ್ಕ ಬೆಟ್ಕೂರ್ ಆಕ್ರೋಶ ವ್ಯಕ್ತಪಡಿಸಿದರು

ಅವರು ಪತ್ರಿಕಾಗೊಷ್ಟಿಯನ್ಬು ಉದ್ದೇಶಿಸಿ ಮಾತನಾಡುತ್ತ ನಾನು ಈ ಹಿಂದೆ ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ದೂರನ್ನು ನಿಡಿದ್ದಿರುತ್ತದೆ ಈ ಬಗ್ಗೆ ಬ್ಯಾಂಕ್ ಆಡಳಿತ ಕಮಿಟಿಯನ್ನು ತೆಗೆದು ಹಾಕುವ ಬಗ್ಗೆ ಹೈಕೊರ್ಟ ಆದೇಶ ಕೂಡ ಮಾಡಿರುತ್ತದೆ ಆದರೆ ಈ ಬಗ್ಗೆ ಸಹಕಾರಿ ಇಲಾಖೆಯ ಡಿ ಆರ್ ಹಿಡಿದು ಯಾವೊಬ್ಬ ಅಧಿಕಾರಿಯು ಕ್ರಮಕ್ಕೆ ಮುಂದಾಗುತ್ತಿಲ್ಲಾ ಕಾಸ್ಕರ್ಡ ಬ್ಯಾಂಕ್ ಎಂ ಡಿ ಹಾಗು ಈ ಅಧಿಕಾರಿಗಳು ಸಹಕಾರಿ ಸಂಘದ ಎಜೆಂಟರಂತೆ ವರ್ತಿಸುತ್ತಿದ್ದಾರೆ ಇದು ತುಂಭ ಖೆದದ ಸಂಗತಿಯಾಗಿದೆ ಒಂದು ವೇಳೆ ಈ ಸಹಕಾರಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಸಂಘಟನೆಯ ವತಿಯಿಂದ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಬದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರ್ಜುನ್ ಮಲ್ಯ ಭಟ್ಕಳ ತಾಲೂಕ ಅಧ್ಯಕ್ಷ ನಾಗೇಂದ್ರ ನಾಯ್ಕ, ಸಹ ಕಾರ್ಯದರ್ಶಿ ವಸಂತ ದೇವಾಡಿಗ, ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top