ಕಾರ್ಮಿಕರ ಕಿಟ್ ವಿತರಣೆಯಲ್ಲಿ ತಾರತಮ್ಯ
ರಾಜಕಿಯ ಪ್ರಚಾರವನ್ನು ಪಡೆಯಲು ಬಡ ಕಾರ್ಮಿಕರ ಅಸಹಾಯಕತೆ ಬಳಸಿಕೊಳ್ಳಲಾಗುತ್ತಿದೆಯೆ?
ಭಟ್ಕಳ : ತಾಲೂಕಿನ ಕಟ್ಟಡ ಕಾರ್ಮಿಕರ ಗೊಳನ್ನು ಯಾರು ಕೇಳುವವರೆ ಇಲ್ಲವಾಗಿದ್ದು ಬೆರಳೆಣಿಕೆಯಲ್ಲಿ ಬಂದ ಕಿಟ್ಗಳನ್ನು ಕೂಡ ಸಮರ್ಪಕವಾಗಿ ಹಚ್ಚಿಕೆ ಮಾಡದೆ ಬಡ ಕಾರ್ಮಿಕರ ಕಿಟ್ ವಿತರಣೆಯಲ್ಲೂ ರಾಜಕಿಯ ಪ್ರಚಾರ ಪಡೆಯಲು ಜನಪ್ರತಿನಿದಿಗಳು ಹವಣಿಸಿದರು ಎಂಬ ಗುಸು ಗುಸು ತಾಲೂಕಿನಾಧ್ಯಂತ ಕೇಳಿ ಬರುತ್ತಿದೆ ಈ ಬಗ್ಗೆ ಒಂದು ವರದಿ ಇಲ್ಲಿದೆ ನೀಡಿ.
ಜಿಲ್ಲೆಯಲ್ಲಿ ಈ ಕಟ್ಟಡ ಕಾರ್ಮಿಕ ಇಲಾಖೆ ಇದ್ದರು ಸತ್ತಂತಿದೆ ಕಾರ್ಮಿಕರ ಹಕ್ಕನ್ನು ಅವರಿಗೆ ನೀಡುವ ಸಂದರ್ಬದಲ್ಲಿ ಈ ಇಲಾಖೆ ಕಾರ್ಮಿಕರನ್ನು ಸತಾಯಿಸುತ್ತದೆ ಈ ಬಗ್ಗೆ ಸಾರ್ವಜನಿಕರು ಹಾಗು ಮಾಧ್ಯಮದವರು ಪ್ರಶ್ನಿಸಿದರೆ ಅದೆ ಮಹಾ ತಪ್ಪು ಎಂಬಂತೆ ಬಿಂಬಿಸುತ್ತದೆ ಈಗಿನ ಅಧಿಕಾರಿಗಳು ನಾವು ಬಂದ ಮೇಲೆ ಎಲ್ಲವನ್ನು ಸರಿ ಮಾಡಿದ್ದೆವೆ ನೀವೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಿರಾ ಎಂಬ ಮಾತನ್ನು ಹೇಳುತ್ತಾರೆ. ಯಾಕೆ ಸ್ವಾಮಿ ನಿಮ್ಮ ಮೇಲೆ ಆರೋಪ ಮಾಡಿದರೆ ಯಾರಿಗೆನು ಲಾಭ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದರೆ ಅದನ್ನು ಹೆಳುವುದೇ ತಪ್ಪೆ ನಿಮಗೆ ನಾಚಿಕೆ ಆಗುವುದಿಲ್ಲವೆ ಬಡ ಕಾರ್ಮಿಕನ ಹಕ್ಕನ್ನು ನಿಮಗೆ ಒದಗಿಸಲು ಸಾಮರ್ತ್ಯ ಇಲ್ಲವಾ ನಿಮಗೆ ಯೋಗ್ಯತೆ ಇಲ್ಲ ವೆಂದ ಮೇಲೆ ಕಾರ್ಮಿಕ ಇಲಾಖೆಯಲ್ಲಿ ಯಾಕಿದ್ದಿರಾ ರಾಜಿನಾಮೆ ಕೊಟ್ಟು ಮನೆಗೆ ಹೊಗಿ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರ ಈ ಆಕ್ರೋಶಕ್ಕೆ ಕಾರಣ ಏನು ಗೊತ್ತೆ ಸಾರ್ವಜನಿಕರೆ ಈ ಕಾರ್ಮಿಕ ಇಲಾಖೆಯಲ್ಲಿ ಅವ್ಯವಸ್ಥೆ ಕಾರ್ಮಿಕನನ್ನು ಗೋಳು ಹೊಯ್ದುಕೊಳ್ಳುವುದೆ ಕಾರಣ ಉದಾಹರಣೆ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕನಿಗೆ ಸಿಗುವ ಸೌಲಬ್ಯವನ್ನು ನೀಡುವ ಸಂದರ್ಬದಲ್ಲಿ ಇಲಾಖೆ ಸಮರ್ಪಕವಾಗಿ ನಿಡುತ್ತಿಲ್ಲಾ ಒಂದಿಲ್ಲೊಂದು ಲೊಪವನ್ನು ಮುಂದಿಟ್ಟು ಕೊಂಡು ಕಾರ್ಮಿಕನ ಸೌಲಬ್ಯಕ್ಕೆ ಕತ್ತರಿ ಹಾಕುತ್ತದೆ ಉದಾಹರಣೆ ಕಾರ್ಮಿನ ಮಕ್ಕಳಿಗೆ ಸಿಗುವ ವಿಧ್ಯಾರ್ಥಿ ವೇತನ ವಿದ್ಯಾರ್ಥಿ ವೇತನ ಕ್ಕಾಗಿ ಎಸ್ಎಸ್ ಪಿ ಪೊರ್ಟಲ್ ಮೂಲಕ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೆ ಅನೇಕ ಕಾರಣ ಮುಂದಿಟ್ಟುಕೊಂಡು ಅರ್ಜಿಗಳನ್ನ ತಿರಸ್ಕರಿಸಲಾಗುತ್ತಿದೆ ಅಲ್ಲದೆ ಭಟ್ಕಳದಲ್ಲಿ ನಿನ್ನೆ ಅಂದರೆ ಗುರುವಾದ ಕಾರ್ಮಿಕ ಇಲಾಖೆಯಲ್ಲಿ ಕಿಟ್ ಹಂಚಿಕೆಯನ್ನು ಮಾಡಲಾಗುತ್ತಿತ್ತು ಅದರಲ್ಲೂ ಕೂಡ ಈ ನಾಚಿಕೆ ಬಿಟ್ಟ ಕಾರ್ಮಿಕ ಇಲಾಖೆ ರಾಜಕಿಯ ಬೇರೆಸಲು ಹೊರಟಿದೆ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಬಂದ ಕಾರ್ಮಿಕ ಕಿಟ್ ನೇರವಾಗಿ ಕೊಡುವುದನ್ನು ಬಿಟ್ಟು ಅದರಲ್ಲಿ ಕೂಡ ರಾಜಕಿಯದ ವಿಷವನ್ನು ಬೇರೆಸಲು ಹೊರಟಂತಿದೆ ಇಲ್ಲಿ ಇಲಾಖೆ ತಪ್ಪೋ ಅಥವಾ ರಾಜಕಾರಣಿಯ ತಪ್ಪೋ ಸಾರ್ವಜನಿಕರೆ ನಿರ್ದರಿಸ ಬೇಕಿದೆ ಕಾರ್ಮಿಕರ ಕಿಟ್ ಪಡೆದುಕೊಳ್ಳುವುದು ಅದು ಕಾರ್ಮಿಕನ ಹಕ್ಕಾಗಿರುತ್ತದೆ ಅದರಲ್ಲಿ ರಾಜಕಾರಣಿಯ ಜನಪ್ರತಿನಿದಿಯ ಹಸ್ತ ಕ್ಷೇಪ ಲವಲೇಶವೂ ಇರಬಾರದು ಆದರೆ ಭಟ್ಕಳದಲ್ಲಿ ಕಾರ್ಮಿಕರ ಕಿಟ್ ವಿತರಣೆಯಲ್ಲಿ ಪಲಾನುಭವಿ ಕಾರ್ಮಿಕರ ಲೀಷ್ಟ ಶಾಸಕರ ಕಛೇರಿಯಲ್ಲಿ ತಯಾರಿಸಲಾಗುತ್ತದೆ ಎಂಬ ಆಕ್ರೋಶದ ಮಾತು ಕೇಳಿಬರುತ್ತಿದೆ ಈ ಇಲಾಖಾ ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಮಾನ ಮರ್ಯಾದೆ ಸ್ವಲ್ಪ ಕೂಡ ಇಲ್ಲವೆ ಕಾರ್ಮಿಕರ ಹಕ್ಕಿಗೆ ಚ್ಯೂತಿ ಊಂಟು ಮಾಡುವ ಕೆಲಸಕ್ಕೆ ಕೈ ಹಾಕುತ್ತಾರಲ್ಲಾ ಭಟ್ಕಳಕ್ಕೆ ಇಲಾಖೆಯಿಂದ 120 ಕಿಟ್ ಗಳನ್ನು ಕೊಡಲಾಗಿತ್ತು ಈ ಕಿಟ್ ನೇರವಾಗಿ ಕಾರ್ಮಿಕರನ್ನು ತಲುಪಿಸುವ ಕೆಲಸ ಮಾಡ ಬೇಕು ಅದನ್ನು ಬಿಟ್ಟು ಪಲಾನುಭವಿಗಳ ಲಿಷ್ಟ ಶಾಸಕರ ಕಛೇರಿಯಲ್ಲಿ ಯಾಕೆ ತಯಾರಿಸಲಾಗುತ್ತದೆ ಅಲ್ಲದೆ ಕಾರ್ಮಿಕರ ಕಿಟ್ಗಳನ್ನು ಶಾಸಕರೆ ಹಚ್ಚ ಬೇಕು ಎಂಬ ಹಟ ಯಾಕೆ ಕಾರ್ಮಿಕರು ತಮ್ಮ ಹಕ್ಕಿಗಾಗಿ ಜಾತಕ ಪಕ್ಷಿಗಳಂತೆ ಕಾಯಬೇಕೆ ಸರಕಾರದ ಪ್ರೋಟೊಕಾಲ್ ಏನಾದು ಇದೆಯೆ ಇದಕ್ಕೆ ಇಲಾಖೆ ಮತ್ತು ಜನಪ್ರತಿನಿದಿಗಳೆ ಉತ್ತರಿಸ ಬೇಕಾಗಿದೆ ಒಂದ 120 ಕಿಟಗಳಲ್ಲಿ ಶಾಸಕರು ಕೆಲವ 40 ಕಿಟ್ಗಳನ್ನು ವಿತರಿಸುತ್ತಾರೆ ಉಳಿದ 80 ಕಿಟ್ಗಳನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿತರಿಸುತ್ತೆವೆ ಎಂದು ಭಟ್ಕಳ ಕಾರ್ಮಿಕ ಇಲಾಖೆ ಹೇಳುತ್ತದೆ ಕಾರ್ಮಿಕ ಇಲಾಖೆಯಲ್ಲಿ ಕೇಳಿದರೆ ಶಾಸಕರೆ ಹೆಳಿದ್ದಾರೆ ಎಂಬ ಮಾತನ್ನು ಹೇಳುತ್ತಾರೆ ಅಲ್ಲಾ ಸ್ವಾಮಿ ಕಾರ್ಮಿಕರ ಹಕ್ಕನ್ನು ಕಾರ್ಮಿಕರಿಗೆ ನೀಡಲು ಶಾಸಕರ ಹಸ್ತಕ್ಷೇಪ ಅವಶ್ಯಕತೆ ಇದೆಯೆ ಕಾರ್ಮಿಕರ ಹಕ್ಕನ್ನು ನೀಡಲು ವಿಳಂಬ ಯಾಕೆ ಕಾರ್ಮಿಕರ ಜೀವನದಲ್ಲಿ ಯಾಕೆ ಈ ಚಲ್ಲಾಟ ಎನ್ನುವುದು ಬಡ ಕಾರ್ಮಿಕನ ಪ್ರಶ್ನೇಯಾಗಿದೆ. ಕಾರ್ಮಿಕ ಇಲಾಖೆ ಈ ನಡೆಯಿಂದ ರೊಚ್ಚಿಗೆದ್ದ ಕಾರ್ಮಿಕರ ತಮಗೆ ಕಿಟ್ಗಳನ್ನು ವಿತರಿಸಿ ಎಂದು ಪಟ್ಟು ಹಿಡಿದಿದ್ದಾರೆ ಕಾರ್ಮಿಕರ ಇಲಾಖೆ ಕಾರ್ಮಿಕರ ಬೇಡಿಕೆ ಹತ್ತಿಕ್ಕಲು ಕಾರ್ಮಿಕ ಅಧಿಕಾರಿ ಕಿಟ್ಗಳನ್ನು ವಿತರಿಸಲು ಸಾಧ್ಯವಿಲ್ಲ ನಮಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿತರಿಸಲು ಸಾಧ್ಯವಿಲ್ಲ ಎನ್ನುವ ಮಾತು ಹೇಳುತ್ತಾರೆ ಇದರಿಂದ ಕಾರ್ಮಿಕರು ರೊಚ್ಚಿಗೆದ್ದಿದ್ದಾರೆ ಕಾರ್ಮಿಕರ ಆಕ್ರೋಶವನ್ನು ಹತ್ತಿಕ್ಕಲು ಕಾರ್ಮಿಕರ ಇಲಾಖೆ ಪೋಲಿಸರನ್ನು ಕರೆಯಿಸಿಕೊಂಡಿದೆ ಮುಖ್ಯವಾಗಿ ಭಟ್ಕಳ ಕಟ್ಟಡ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಪರಿಸ್ಥಿತಿ ಅಡ ಕತ್ತರಿಯಲ್ಲಿ ಸಿಕ್ಕಿರುವ ಅಡಕೆಯಂತಾಗಿದೆ ಇತ್ತ ಕಾರ್ಮಿಕನ ಆಕ್ರೋಶ ಅತ್ತ ಜನಪ್ರತಿನಿದಿಗಳ ಒತ್ತಡ ಒಟ್ಟಾರೆ ಕಾರ್ಮಿಕ ಬಿದಿಗಿಳಿಯು ಪರಿಸ್ಥಿತಿ ನಿರ್ಮಾಣವಾಗಿದೆ