ಜತ್ರಾಮಹೊತ್ಸವದ ಗದ್ದುಗೆಯಲ್ಲಿ ವಿರಾಜಮಾನನಾಗಿ ಕುಳಿತ ಸೀಮಾ ಮುಖ್ಯಪ್ರಾಣ ದೇವರ ಆಶೀರ್ವಾದ ಪಡೆದ ಮಾಜಿ ಶಾಸಕ ಮಂಕಾಳ ವೈದ್ಯ


ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಸೀಮಾ ಮುಖ್ಯಪ್ರಾಣ ದೇವರ ಹದಿನಾರನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಅತಿ ವಿಜೃಂಭಣೆಯಿಂದ ಸಂಪನ್ನಗೊಂಡಿತು .ಜಾತ್ರಾ ಮಹೋತ್ಸವದ ಎರಡನೇ ದಿನವಾದ ಇಂದು ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಪಾಲ್ಗೊಂಡು ಶ್ರೀ ದೇವರಿಗೆ ವಿಶಷ ಪೂಜೆ ಸಲ್ಲಿಸಿ ಶ್ರೀ ಸೀಮಾ ಮುಖ್ಯಪ್ರಾಣ ದೇವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸರ್ವ ಸದಸ್ಯರು ತಾಲೂಕಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ನಾಯ್ಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಎಸ್ ನಾಯ್ಕ್ ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ರಾಘವೇಂದ್ರ ಆರ್ ನಾಯ್ಕ್ ವಿ ಎಸ್ ಎಸ್ ಬ್ಯಾಂಕ್ ನಿರ್ದೇಶಕ ಉದಯ ನಾಯ್ಕ್ ಗೋಪಾಲ ನಾಯ್ಕ್ ಬಲ್ಸೆ ಬಾಸ್ಕರ್ ನಾಯ್ಕ್ ನಗರಬಸ್ತಿ ಕೆರಿ ಪ್ರಜಾಪ್ರತಿನಿಧಿ ಗುರುರಾಜ ನಾಯ್ಕ್ ಹಾಗೂ ಇನ್ನೂ ಅನೇಕ ಮಾಂಕಾಳ ವೈದ್ಯರ ಅಭಿಮಾನಿಗಳು ಕಾರ್ಯಕರ್ತರು ವೈದ್ಯರ ಜೊತೆ ಪಾಲ್ಗೊಂಡು ಶ್ರೀ ಸೀಮಾ ಮುಖ್ಯಪ್ರಾಣ ದೇವರ ಆಶೀರ್ವಾದ ಪಡೆದರು.

WhatsApp
Facebook
Telegram
error: Content is protected !!
Scroll to Top