ಭಟ್ಕಳ ತಾಲೂಕ ಸಹಾಯಕ ಆಯುಕ್ತರ ಕಛೇರಿಯಲ್ಲಿ ರಾಜಕಿಯ ಪಕ್ಷದ ನಾಯಕರನ್ನೊಳಗೊಂಡಂತೆ ಸಭೆ

ಮತದಾರರ ಪಟ್ಟಿ ಪರಿಷ್ಕರಣೆ ಸಂಬಂದ ಸಹಾಯಕ ಆಯುಕ್ತರ ಮುಂದಾಳತ್ವದಲ್ಲಿ ಸಭೆ

ಭಟ್ಕಳ ತಾಲೂಕಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಸಂಬಂದ ರಾಷ್ಟ್ರೀಯ ರಾಜಕಿಯ ಪಕ್ಷದ ನಾಯಕರೊಂದಿಗೆ ತಾಲೂಕ ಸಹಾಯಕ ಆಯುಕ್ತರ ಕಛೇರಿಯಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಬದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂದರೆ ತಿದ್ದುಪಡಿ ಸೆರ್ಪಡೆಯ ಬಗ್ಗೆ ಚರ್ಚಿಸಲಾಯಿತು ನವಂಬರ್ 9 ರಂದು ಕರಡು ಮತದಾರರ ಪಟ್ಡಿ ಪ್ರಕಟಣೆ ಗೊಂಡಿಂದು ಡಿಸೆಂಬರ್ 8 ಮತದಾರ ಪಟ್ಟಿ ತಿದ್ದುಪಡಿಗೆ ಕೊನೆಯ ದಿನಾಂಕವಾಗಿದ್ದು ಮತದಾರ ಚಿಟಿ ತಿದ್ದುಪಡಿ ಸೆರ್ಪಡೆಗೆ ಅವಕಾಶವಿದೆ ಜನವರಿ 5 ಕ್ಕೆ ಸಂಪೂರ್ಣ ಮತದಾರರ ಪಟ್ಟಿ ಪ್ರಕಟಣೆಯಾಗಲಿದ್ದು ಈ ಮತದಾರರ ಪಟ್ಟಿಯ ಮುಖಾಂತರ ಚುನಾವಣೆ ನಡೆಯಲಿದೆ ಎಂಬುವುದು ತಿಳಿದು ಬಂದಿದೆ

ಈ ಸಂದರ್ಬದಲ್ಲಿ ಭಟ್ಕಳ ತಾಲೂಕಿನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ್ ನಾಯ್ಕ ವಿಧಾನ ಸಭಾ ಕ್ಷೇತ್ರದ ಚುನಾವಣೆ ಹತ್ತಿರ ಬರುತ್ತಿದ್ದು ಈ ಸಂಬಂದ ಸಾರ್ವಜನಿಕರು ಇದೆ ಬರುವ ಡಿಸೆಂಬರ್ 8 ಒಳಗಾಗಿ ತಮ್ಮ ಹೆಸರನ್ನು ಸೇರಿಸಿಕೊಳ್ಳ ಬೇಕು ತಿದ್ದುಪಡಿ ಮಾಡಿಕೊಳ್ಳುವವರು ಈ ದಿನಾಂಕದ ಒಳಗೆ ಮಾಡಿಸಿಕೊಳ್ಳಿ ನಮ್ಮ ಯುವಕರಲ್ಲಿ ಮತದಾನದ ಜಾಗ್ರತಿ ಮೂಡಬೇಕಾಗಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ತಾಲೂಕ ತಹಶಿಲ್ದರಾದ ಸುಮತ್ ಬಿ ಇ , ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ್ ದೈಮನೆ ಹಾಗು ಇತರ ರಾಜಕಿಯ ಪಕ್ಷದ ನಾಯಕರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top