ಭಟ್ಕಳ ಶಿರಾಲಿಯಲ್ಲಿ ಶ್ರೀ ಮತ್ ಸ್ವಾಮಿ ಪಾಂಡುರಂಗಾಶ್ರಮ‌ ಮಾರ್ಗ ಉದ್ಗಾಟನೆ

ಭಟ್ಕಳ ತಾಲೂಕಿನ ಶಿರಾಲಿ ವೃತ್ತ ಚಿತ್ರಾಪುರ ಶ್ರೀ ಮಠ ಮಹಾದ್ವಾರದಿಂದ ಶಿರಾಲಿ ರಾಷ್ಟ್ರೀಯ ಹೆದ್ದಾರಿ ವೃತ್ತದ ವರೆಗೆಗಿ ಮಾರ್ಗವನ್ನು ಚಿತ್ರಾಪುರ ಮಠಾದೀಶರಾದ ಪರಮ ಪೂಜ್ಯ ಸದ್ಯೋಜಾತ ಶಂಕರಾಶ್ರಮ ಸ್ವಾಮಿಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಮತ್  ಸ್ವಾಮಿ ಪಾಂಡುರಂಗಾಶ್ರಮ‌ ಮಾರ್ಗ ಎಂದು ನಾಮಕರಣ ಮಾಡಲಾಯಿತು

ಚಿತ್ರಾಪುರ ಮಠಾದೀಶರಾದ ಪರಮ ಪೂಜ್ಯ ಸದ್ಯೋಜಾತ ಶಂಕರಾಶ್ರಮ  ಸ್ವಾಮಿಜಿಗಳು

ಶ್ರೀ ಚಿತ್ರಾಪುರ ಮಠದ ಅಭಿವೃದ್ಧಿಯ ಹರಿಕಾರರು, ಅತ್ಯಂತ ಶ್ರೇಷ್ಠ ಜ್ಯೋತಿಷಿಗಳು ಮತ್ತು ನಮ್ಮ ಸಮಾಜದ ಅಭಿವೃದ್ಧಿಗಾಗಿ ಹಲವಾರು ಊರುಗಳಲ್ಲಿ ದೇವಸ್ಥಾನಗಳನ್ನು ಸ್ಥಾಪಿಸಿ ಚಿತ್ರಾಪುರ ಸಾರಸ್ವತ ಸಮಾಜಕ್ಕೆ ದೈವಿಕ ಕೊಡುಗೆಗಳನ್ನು ನೀಡಿದ ಮತ್ತು ಪ್ರಸ್ತುತ ನಮ್ಮ ಮಠವಿರುವ ಸ್ಥಳವನ್ನು ಚಿತ್ರಾಪುರ ಎಂದು ನಾಮಕರಣ ಮಾಡಿ ಆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಮಠದ 𝟾ನೇ ಮಠಾಧಿಪತಿಗಳಾಗಿದ್ದ ಶ್ರೀಮದ್ ಪಾಂಡುರಂಗಾಶ್ರಮ ಸ್ವಾಮಿಗಳ ಸ್ಮರಣೆಗಾಗಿ ಶಿರಾಲಿಯಿಂದ ಚಿತ್ರಾಪುರ ತೆರಳುವ ಮಾರ್ಗಕ್ಕೆ ಶ್ರೀಮತ್ ಸ್ವಾಮಿ ಪಾಂಡುರಂಗಾಶ್ರಮ ಮಾರ್ಗ ಎಂದು ನಾಮಕರಣ ಮಾಡಲಾಯಿತು.

ಈ ಸಂದರ್ಬದಲ್ಲಿ ಶಾಸಕ ಸುನಿಲ್ ನಾಯ್ಕ ಶಿರಾಲಿ ಪಂಚಾಯತ್ ಅಧ್ಯಕ್ಷ ಭಾಸ್ಕರ್ ದೈಮನೆ ಸದಸ್ಯ ವೆಂಕಟೇಶ ನಾಯ್ಕ ಸಾರಸ್ವತ ಸಮಾಜ ಬಂದುಗಳು ಸಾರ್ವಜನಿಕರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top