ಸಿದ್ದಾಪುರ:- ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯ ಕ್ರಮವನ್ನು ತಾಲ್ಲೂಕಿನ ಕಾನಸೂರ ಸಭಾಭನದಲ್ಲಿ ನಡೆಸಲಾಯಿತು. ಕಾರ್ಯ ಕ್ರಮವನ್ನು ತಹಶಿಲ್ದಾರ ಸಂತೋಷ ಭಂಡಾರಿ ಉದ್ಘಾಟಿಸಿದರು.
ಸಭೆಯಲ್ಲಿ ೩೦ ಅರ್ಜಿಗಳು ಸ್ವೀಕೃತವಾದವು. ವಿವಿಧ ಯೋಜನೆ ಗಳಲ್ಲಿ ಮಂಜೂರಾದ ೪೭ ಫಲಾನುಭವಿಗಳಿಗೆ ಮಾಶಾಸನ ಮಂಜೂರಿ ಆದೇಶಗಳನ್ನು ವಿತರಿಸಲಾಯಿತು.
ಸಭಾ ಕಾರ್ಯಕ್ರಮ ದ ನಂತರ ಎಸ್ ಸಿ ಕೇರಿಗೆ ಭೇಟಿ ನೀಡಲಾಯಿತು.
ಸಂದರ್ಭದಲ್ಲಿ ಕಾನಸೂರ ಗ್ರಾಮ ಪಂಚಾಯತ ಅಧ್ಯಕ್ಷ ವೀರಭದ್ರ ಜಂಗಣ್ಣನವರ, ಉಪಾಧ್ಯಕ್ಷ ಶೀಮತಿ ಶಶಿಪ್ರಭಾ.ವಿ.ಹೆಗಡೆ. ಗ್ರಾಮ ಪಂಚಾಯತಿ ಸದಸ್ಯರುಗಳು. ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತರಾವ್, ಉಪ ತಹಶಿಲ್ದಾರ ಡಿ.ಎಮ್ ನಾಯ್ಕ, ಕಂದಾಯ ನಿರೀಕ್ಷ ವಿಜಯಕುಮಾರ ಕಟ್ಟಿ ಹಾಗೂ ತಾಲೂಕಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹರೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಪಿಡಿಓ ಹರ್ಷಾ ರಾಠೋಡ ಸ್ವಾಗತಿಸಿದರು.