ಭಟ್ಕಳ: ತಾಲೂಕ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಬೆಳ್ಕೆ ಇದರ 2021, 2022 ಸಾಲಿನ ಸರ್ವಸಾದಾರಣ ಸಭೆಯನ್ನು ಸಂಘದ ಅಧ್ಯಕ್ಷ ಮಂಜುನಾಥ ಲಚ್ಮಯ್ಯ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
ಈ ಸಂದರ್ಬದಲ್ಲಿ ಸಂಘದ ಅಧ್ಯಕ್ಷರಾದ ಮಂಜುನಾಥ ಲಚ್ಮಯ್ಯ ನಾಯ್ಕ ಅವರು ಮಾತನಾಡಿ ವರದಿಯ ವರ್ಷದಲ್ಲಿ ನಮ್ಮ ಸಂಘವು ಸರ್ವ ದೀಶೆಯಲ್ಲಿ ಪ್ರಗತಿಯನ್ನು ಕಾಯ್ದುಕೊಂಡು ತನ್ನ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ ಶೇರುದಾರರು ಸಂಘದ ಸದಸ್ಯರು ಬ್ಯಾಂಕಿನ ಅಭಿವೃದ್ದಿಗೆ ಸಹಕರಿಸ ಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಅಣ್ಣಪ್ಪ ನಾರಾಯಣ ನಾಯ್ಕ ಮಾತನಾಡಿ ಸಂಘದಲ್ಲಿ ದೊರೆಯುವ ಸಾಲ ಸೌಲಬ್ಯಗಳಾದ ಕ್ರಷೀ ಸಾಲ ಹೈನುಗಾರಿಕೆ ಸಾಲ ವೈಯಕ್ತಿಕ ಸಾಲ ಹೀಗೆ ಅನೇಕ ಸಾಲದ ಬಗ್ಗೆ ಮಾಹಿತಿಯನ್ನು ನೀಡಿದರು
ಈ ಸಂದರ್ಬದಲ್ಲಿ ಸಂಘದ ಶೇರುದಾರರಾದ ಜಗದೀಶ ಲಚ್ಮಯ್ಯ ನಾಯ್ಕ ಅವರು ಸಂಘಕ್ಕೆ ಜವಾನರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮುಂಬಡ್ತಿ ಕೊಡಬೇಕು ಎಂದು ಆಗ್ರಹಿಸಿದರು.
ಸಂಘದಲ್ಲಿ ನಾವು ಇಟ್ಟ ಠೇವಣಿಯ ಬಡ್ಡಿದರವನ್ನು ನೀವು ಕಡಿತಗೊಳಿಸಿದ್ದಿರಿ ಹಾಗೆ ನಾವು ಮಾಡಿರುವ ಸಾಲಕ್ಕೆ ಬಡ್ಡಿದರವನ್ನು ಕಡಿತಗೋಳಿಸ ಬೇಕು ಎಂದು ಸಂಘದ ಶೇರುದಾರರು ಆಗ್ರಹಿಸಿದರು.
ಈ ಸಂದರ್ಬದಲ್ಲಿ ಸಂಘದ ಅಧ್ಯಕ್ಷರು ನಿರ್ದೇಶಕರು ಮುಖ್ಯಕಾರ್ಯನಿರ್ವಾಹಕರು ಮತ್ತು ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು