ಮುರ್ಡೆಶ್ವರದ ಶಿವಕ್ರಪಾ ಲಾಡ್ಜ ಮೇಲೆ ಪೋಲಿಸ್ ಇಲಾಖೆಯ ದಿಡಿರ್ ದಾಳಿ

ವೇಶ್ಯವಾಟಿಕೆ ನಡೆಸುತ್ತಿದ್ದ ದಂದೆಕೊರರ ಹೆಡೆಮುರಿ ಕಟ್ಟಿದ ಪೋಲಿಸರು

ಭಟ್ಕಳ ತಾಲೂಕಿನ ಮುರ್ಡೆಶ್ವರ ಮಾವಳ್ಳಿ ೨ ಭಟ್ರಹಿತ್ಲು ಶಿವಕ್ರಪಾ ಲಾಡ್ಜ ಒಂದರಲ್ಲಿ ವೇಶ್ಯವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿಯ ಅನ್ವಯ ಸಿ ಪಿ ಐ ಮಹಾಬಲೇಶ್ವರ ನಾಯ್ಕ ಎಕಾಏಕಿ ದಾಳಿ ನಡೆಸಿ ಇಬ್ಬರು ವೇಶ್ಯಾವಾಟಿಕೆ ದಂದೆಕೊರರನ್ನು ಹೆಡೆಮುರಿ ಕಟ್ಟಿರುವುದು ವರದಿಯಾಗಿದೆ

ತಾಲೂಕಿನಲ್ಲಿ ಅಮಾಯಕ ಮಹಿಳೆಯರ ಸಂಕಷ್ಟಗಳನ್ನೆ ತಮ್ಮ ಬಂಡವಾಳವನ್ನಾಗಿಸಿಕೊಂಡು ಅವರನ್ನು ವೇಶ್ಯವಾಟಿಕೆ ದಂದೆಗೆ ದೂಡಿ ಮಾಂಸದಂದೆಯಿಂದ ಐಶಾರಾಮಿ ಜೀವನವನ್ನು ಮಾಡುವುದು ಹಾಗು ತಮ್ಮ ಹೆಂಡತಿ ಮಕ್ಕಳ ಹೊಟ್ಟೆಯನ್ನು ತುಂಬಿಸುವ ತಲೆಹಿಡುಕರು ಸ್ರಷ್ಟಿಯಾಗಿದ್ದಾರೆ ಎಂಬ ಗುಸು ಗುಸು ತಾಲೂಕಿನಾಧ್ಯಂತ ಹರಿದಾಡುತ್ತಿತ್ತು ಇದಕ್ಕೆ ಪುಷ್ಟಿಕೊಡುವಂತೆ ಸೊಮವಾರವಾದ ಇಂದು ಗ್ರಾಮಿಣ ಪೋಲಿಸ್ ಠಾಣೆಯ ಸಿ ಪಿ ಐ ಮಹಾಬಲೇಶ್ವರ ನಾಯ್ಕ ಅವರು ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಗಳೊಂದಿಗೆ ಮುರ್ಡೆಶ್ವರ ಮಾವಳ್ಳಿ ಎರಡು ಭಟ್ರಹಿತ್ಲು ಶಿವಕ್ರಪಾ ಲಾಡ್ಜ ಒಂದರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ

ಹೊನ್ನಾವರ ಮಂಕಿ ಬಿದ್ರಕೇರಿಯ ನಾಗರಾಜ ಮಂಜುನಾಥ ಮೊಗೇರ್, ಮುರ್ಡೆಶ್ವರ ಮಾವಳ್ಳಿ ೨ ರ ಮಯೂರ ಸುರೇಶ ಮುರ್ಡೆಶ್ವರ , ಶಿವಪ್ರಸಾದ ರಾಮ್ ರಾವ್ ಈ ನಾಲ್ವರು ಸೇರಿಕೊಂಡು ತಮ್ಮ ಲಾಭಕ್ಕೋಸ್ಕರ ಮಹಿಳೆಯರ ಅಸಾಹಯಕತೆಯನ್ನು ದುರ್ಬಳಕೆ ಮಾಡಿಕೊಂಡು ಬೆಂಗಳೂರು ಪಿಣ್ಯ 8 ನೇ ಮೈಲಿನ ಶಿಲ್ಪಾ ರಮೇಶ ಬಿ ಎಮ್ ಮತ್ತು ಹಾಸನದ ಬೆಲೂರು ತಾಲೂಕಿನ ಯಶೋದಾ ಅರ್ಜುನ್ ಇವರ ಶೋಚನಿಯ ಪರಿಸ್ಥಿತಿಯನ್ನು ತಮ್ಮ ಬಂಡವಾಳವನ್ನಾಗಿಸಿಕೊಂಡು ಈ ಮಹಿಳೆಯರನ್ನು ಮುರ್ಡೆಶ್ವರದ ಶಿವಕ್ರಪಾ ಲಾಡ್ಜ ಗೆ ಕರೆಯಿಸಿ ಗಿರಾಕಿಗಳಿ ಒದಗಿಸಿ ಬಂದ ಹಣವನ್ನು ಪಡೆದುಕೊಂಡು ಅಮಾಯಕ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದಾರೆ

ಸಿ ಪಿ ಐ ಮಹಾಬಲೇಶ್ವರ ಅವರು ಹೊನ್ನಾವರ ಮಂಕಿ ಬಿದ್ರಕೇರಿಯ ನಾಗರಾಜ ಮಂಜುನಾಥ ಮೊಗೇರ್,  ಮುರ್ಡೆಶ್ವರ ಮಾವಳ್ಳಿ ೨ ರ ಮಯೂರ ಸುರೇಶ ಮುರ್ಡೆಶ್ವರ ,ಎಂಬ ಇಬ್ಬರು ಆರೋಪಿತರನ್ನು ಬಂದಿಸಿ 370 (ಎ)(2) ಐ ಪಿ ಸಿ ಮತ್ತು 3 4 5 6 Immoral traffic prevention act 1956 ಅಡಿಯಲ್ಲಿ ದೂರು ದಾಖಲಿಸಲಾಯಿತು.

ಘಟನಾ ಸ್ಥಳದಲ್ಲಿ ಎರಡು ಉಪಯೋಗಿಸದೆ ಇರುವ ಕೊಂಡಮ್ , ಒಂದು ಲಾಡ್ಜಿನ ಲೆಡ್ಜರ್ ಬುಕ್ ಹಾಗು 3000 ನಗದನ್ನು ವಶಪಡಿಸಿಕೊಳ್ಳಲಾಗಿದೆ .

WhatsApp
Facebook
Telegram
error: Content is protected !!
Scroll to Top