ಭಟ್ಕಳ ತಾಲೂಕ ದಿಮಂತ ನಾಯಕ ನಾರಾಯಣ ಶಿರೂರ್ ಅಸ್ತಂಗತ

ದಲಿತ ಹೊರಾಟಗಾರ ನಾರಾಯಣ ಶಿರೂರ್ ಅವರ ಅಂತಿಮ ದರ್ಶನ ಪಡೆದ ಗಣ್ಯಾತಿಗಣ್ಯರು

ಭಟ್ಕಳ : ತಾಲೂಕ ದಲಿತ ಹಾಗು ಸಾಮಾಜಿಕ ಹೋರಾಟಗಾರ ನಾರಾಯಣ ಶಿರೂರ್ ಅವರು ತಮ್ಮ ಸ್ವಗ್ರಹಲ್ಲಿ ದೇಹತ್ಯಾಗವನ್ನು ಮಾಡಿದ್ದು ಮೃತರ ಅಂತಿಮ ದರ್ಶನವನ್ನು ಗಣ್ಯಾತಿಗಣ್ಯರು ಮಾಡಿದರು

ನಾರಾಯಣ ಶಿರೂರ್ ಎಂದಾಕ್ಷಣ ದಲಿತ ಹೋರಾಟಗಳು ಕಣ್ಣೆದುರಿಗೆ ಬರುತ್ತದೆ ಅವರು ತಮ್ಮ ಜೀವಿತಾವದಿಯ ಸಂಪೂರ್ಣ ಸಮಯಗಳನ್ನು ದಲಿತರಿಗೆ ನ್ಯಾಯವನ್ನು ಒದಗಿಸುವುದರಲ್ಲೆ ಕಳೆದುಬಿಟ್ಟರು ಜಿಲ್ಲೆಯಾಧ್ಯಂತ ದಲಿತ ಯುವಕರಿಗೆ ಸ್ಪೂರ್ತಿಯನ್ನು ತುಂಬಿ ಎಷ್ಟೋ ದಲಿತ ಹೋರಾಟಗಾರರನ್ನು ಹುಟ್ಟುಹಾಕಿದ ಅಪ್ರತಿಮ ದಲಿತ ಹೋರಾಟಗಾರ ನಾರಾಯಣ ಶಿರೂರ್ ಆಗಿದ್ದಾರೆ ಇವರ ಗರಡಿಯಲ್ಲಿ ಪಳಗಿದ ಅದೇಷ್ಟೋ ದಲಿತ ಹೋರಾಟಗಾರರು ಇಂದು ನಾರಾಯಣ ಶಿರೂರ್ ಅವರ ಗುಣಗಾನವನ್ನು ಮಾಡುತ್ತಿದ್ದಾರೆ ಇಂತಹ ದಿಮಂತ ಹೋರಾಟಗಾರ ವಯೋಸಹಜ ಸಾವಿಗೆ ಇಡಾಗಿದ್ದಾರೆ ಇವರು ವೃದ್ದಾಪ್ಯದ ಕಾರಣ ಬಳಲಿ ಹೊಗಿದ್ದರು ದಿನಾಂಕ ಸೆಪ್ಟೆಂಬರ್ ೧೭ ರಾತ್ರಿ ೧೨ ರ ಆಸುಪಾಸಿಗೆ ತಮ್ಮ ದೇಹತ್ಯಾಗವನ್ನು ಮಾಡುವುದರ ಮೂಲಕ ದಲಿತ ಸಮಾಜಕ್ಕೆ ತುಂಬಲಾರದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ

ನಾರಾಯಣ ಶಿರೂರ್ ಅವರ ಗರಡಿಯ ಪಳಗಿದ ಅವರ ಶಿಷ್ಯ ದಲಿತ ಸಂಘಟನೆ ಜಿಲ್ಲಾಧ್ಯಕ್ಷ ತುಳಸಿದಾಸ ಪಾವಸ್ಕರ್ ನಾರಾಯಣ ಶಿರೂರ್ ಅವರ ಮೃತ್ಯುವಿನ ಬಗ್ಗೆ ಮಾತನಾಡಿ ನಾgಯಣ ಶಿರೂರ್ ಅವರು ಒಬ್ಬ ದಿಮಂತ ದಲಿತ ನಾಯಕ ಹೊರಾಟಗಾರರಾಗಿದ್ದಾರೆ ಇವರು ನಮಂತಹ ಅನೇಕ ದಲಿತ ನಾಯಕ ಹೊರಾಟಗಾರರನ್ನು ಹುಟ್ಟುಹಾಕಿದ್ದಾರೆ ಇಂದು ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಇದ್ದು ನಮ್ಮ ದಲಿತ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು

ಇದೆ ಸಂದರ್ಬದಲ್ಲಿ ಇನ್ನೊಬ್ಬ ದಲಿತ ಹೋರಾಟಗಾರ ದೀಪಕ್ ಕುಡಾಲ್ಕರ್ ಕಾರವಾರ ಇವರು ಮಾತನಾಡಿ ನಾರಾಯಣ ಶಿರೂರ್ ಇವರು ದಲಿತ ಹೊರಾಟಗಾರರಲ್ಲೆ ಅಪ್ರತಿಮರು ಎಂದರೆ ತಪ್ಪಾಗಲಿಕ್ಕಿಲ್ಲಾ ಇವರ ವಿಷಯ ಮಂಡನೆ ಹೊರಾಟದ ಶೈಲಿ ಗಟ್ಟಿತನದ ಬಗ್ಗೆ ಹೇಳಿದಷ್ಟು ಸಾಲದು ಇವರ ಸಾವು ನಮಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದು ಹೇಳಿದರು

ಮೃತರ ಅಂತಿಮ ದರ್ಶನವನ್ನು ಶಾಸಕ ಸುನಿಲ್ ನಾಯ್ಕ ತಾಲೂಕ ಸಹಾಯ ಆಯುಕ್ತರಾದ ಮಮತಾ ದೇವಿ ಡಿ ವೈ ಎಸ್ ಪಿ ಬೆಳ್ಳಿಯಪ್ಪ ಸಿಪಿಐ ದಿವಾಕರ್ ತಹಶಿಲ್ದಾರ್ ಸುಮಂತ ಬಿ ಇ ಮುಂತಾದವರು ಪಡೆದುಕೊಂಡರು

WhatsApp
Facebook
Telegram
error: Content is protected !!
Scroll to Top