ಮಾಸದ ನೆನಪು ಕೇವಲ ಕ್ರತಿ ಮಾತ್ರವಲ ಅದು ಅಕ್ಷರ ಗರ್ಭದಿಂದ ಹೊರಹೊಮ್ಮಿರು ನೆನಪಿನ ಕೂಸುಗಳು ಡಾ, ಮೈತ್ರೇಯಿಣಿ ಗದಿಗೆಪ್ಪ ಗೌಡರ್

ಸಿದ್ದಾಪುರ:- ಸತ್ಯವನ್ನು ಕಟ್ಟಿಕೊಡುವ ಗಟ್ಟಿತನ ಕೃತಿಕಾರರಲ್ಲಿರಬೇಕು. ಅದನ್ನು ಕೊಳಗಿಯವರು ತಮ್ಮ ಮಾಸದ ನೆನಪುಗಳು ಕೃತಿಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ‌ ಎಂದು ಸಾಹಿತಿಗಳು, ವಿಮರ್ಷಕರಾದ ಡಾ, ಮೈತ್ರೇಯಿಣಿ ಗದಿಗೆಪ್ಪ ಗೌಡರ್ ಹೇಳಿದರು


ಅವರು ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಪ್ರಯಾಗ ಸೇವಾ ಸಂಸ್ಥೆ, ಆದ್ಯೋತ ವೆಬ್ ನ್ಯೂಸ್ ಗಳ ಸಹಯೋಗದಲ್ಲಿ ಗಂಗಾಧರ ಕೊಳಗಿ ಯವರ ಮಾಸದ ನೆನಪುಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬೇಕಾದಂತಹ ಅಗ್ರಗಣ್ಯ ವ್ಯಕ್ತಿಗಳ ಪರಿಚಯ ಈ ಲೇಖನದಲ್ಲಿ ವಿಸ್ತೃತ ವಾಗಿ ಬರೆದಿದ್ದಾರೆ.
ಈ ತಲೆಮಾರಿನ ಓದುಗರಿಗೆ ಬೇಕಾದ ಬರಹಗಳು ಸರಳವಾಗಿ, ಸಂಕ್ಷಿಪ್ತವಾಗಿ, ಸುಂದರವಾಗಿರಬೇಕು. ಅದು ಈ ಕೃತಿಯಲ್ಲಿದೆ.
ನಾವು ಇಂದು ಮಾಧ್ಯಮಗಳಿಗೆ ದಾಸರಾಗಿದ್ದೇವೆ.
ನಮಗೆ ಕೃತಿ ಬರವಣಿಗೆ ಮಾತ್ರ ಮುಖ್ಯವಾಗುತ್ತದೆ. ಕೊಳಗಿಯವರ
ಆತ್ಮಚರಿತ್ರೆಯಂತೆ ಕೃತಿ ಮೂಡಿಬಂದಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ ಮಾತನಾಡಿ ಬದುಕಿದ್ದ ಹಾಗೆ ಬದುಕುವವರು ಬಹಳ ಕಡಿಮೆ. ಲೇಖನ ಬರೆಯುವುದು ಬಹಳ ಕಷ್ಟ. ಅದಕ್ಕೆ ಓದು, ತಾಳ್ಮೆ ಇರಬೇಕು. ಇಂದಿನ ದಿನದಲ್ಲಿ ಯಾರನ್ನೋ ಮೆಚ್ಚಿಸುವ ಉದ್ದೇಶ ದಿಂದ ನಮ್ಮೋಳಗಿನ ತನವನ್ನು ಮರೆಯುತ್ತಿದೇವೆ‌.
ವಚನಾದಿ ಶರಣರು ಹೇಳಿದ ಹಾಗೆ ಎಲ್ಲರೂ ಒಂದಾಗಿ ಬಾಳೋಣ ಎಂದರು.
ಸಾಹಿತಿ ಸುಬ್ರಾಯ ಮತ್ತಿಹಳ್ಳಿ
ಅದ್ಯೋತ ನ್ಯೂಸ್ ನ ಗಣೇಶ ಭಟ್ಟ್,
ಸಾಹಿತಿ ಗಂಗಾಧರ ಕೊಳಗಿ
ಕಸಾಪದ ತಾಲೂಕಾಧ್ಯಕ್ಷ ಗೋಪಾಲ ಭಾಶಿ ವೇದಿಕೆಯಲ್ಲಿದ್ದರು.

ವರದಿ ಸುರೇಶ ಕಡಕೇರಿ ಸಿದ್ದಾಪುರ

WhatsApp
Facebook
Telegram
error: Content is protected !!
Scroll to Top