ಮಂಜುನಾಥ ಮಂಡಿಸಿದ ಪ್ರಬಂದಕ್ಕೆ ಡಾಕ್ಟರೇಟದ ಪದವಿ
ಭಟ್ಕಳ: ಆಯುರ್ವೇದ ಶಸ್ತ್ರಚಿಕಿತ್ಸಾ ವೈದ್ಯರಾದ ಡಾ ಮುಂಜುನಾಥ ಭಟ್ ಅವರು ಮಂಡಿಸಿದ್ದ ಪ್ರಬಂದಕ್ಕೆ ರಾಜೀವ್ ಗಾಂದಿ ಆರೋಗ್ಯ ವಿಜ್ಞಾನಗಳ ವಿಶ್ವವಿಧ್ಯಾಲಯ ಗೌರವ ಡಾಕ್ಟರೆಟ್ ನೀಡಿ ಗೌರವಿಸಿದೆ
ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೆಜು ಮತ್ತು ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ ಶ್ರೀನಿವಾಸ ಬನ್ನಿಗೋಳ್ ಮಾರ್ಗದರ್ಶನದಲ್ಲಿ ರಚಿಸಲಾದ ಮಹಾ ಪ್ರಬಂದ ಅ ಕ್ಲಿನಿಕಲ್ ಸ್ಟಡಿ ಆನ್ ದಿ ಎಪಿಕಸಿ ಅಪ್ ಜಲೌಕಾವಚರಣ ಆ್ಯಂಡ್ ಸಿರಾವ್ಯದ ಬೈ ಕಠಾರಿಕ ಶಸ್ತ್ರ ಇನ್ ದ ಮ್ಯಾನೇಜ್ ಮೆಂಟ್ ಆಪ್ ಸಿರಾಜಗ್ರಂಥಿ ವಿದ್ ರೆಪೆರೆನ್ಸ ಟು ವೆರಿಕೋಸ್ ವೆನ್ಸ ಅನ್ನು ಅಂಗಿಕರಿಸಿ ಡಾಕ್ಟರೇಟ್ ಪದವಿ ನೀಡಿದೆ ತಾಲೂಕಿನ ಮೂಡಭಟ್ಕಳದವರಾದ ಡಾ ಮಂಜುನಾಥ ಭಟ್ ಪ್ರಸ್ತುತ ಮೂಡಬೀದರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಹಾಗು ವೈದ್ಯಕೀಯ ಅಧಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಶಸ್ತ್ರ ಚಿಕಿತ್ಸೆಯೊಂದಿಗೆ ಅಗ್ನಿಕರ್ಮ ಕ್ಷಾರಕರ್ಮ , ಹಾಗು ರಕ್ತಮೊಕ್ಷಣ ಚಿಕಿತ್ಸೆಗಳನ್ನು ತಮ್ಮ ಚಿಕಿತ್ಸಾ ವಿದಾನದಲ್ಲಿ ಅಳವಡಿಸಿಕೊಂಡಿರುವ ಇವರನ್ನು ಬೆಂಗಳೂರಿನ ರಾಜಿವ್ ಗಾಂದಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಯುರ್ವೇದ ವಿಭಾಗದ ಡೀನ್ ಡಾ ಪ್ರಶಾಂತ ಎಂ ಎಸ್ ಅವರು ಅಭಿನಂದಿಸಿದ್ದಾರೆ