ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಪಟ್ಟ ಸ್ವೀಕರಿಸಿ ಬಂದ ಗೋವಿಂದ ನಾಯ್ಕ್ ಅವರಿಗೆ ಬರ್ಜರಿ ಸ್ವಾಗತ

ಕರಾವಳಿ ಭಾಗಕ್ಕೆ ವಿಶೇಷ ಆದ್ಯತೆ ನೀಡುತ್ತೇನೆ: ಗೋವಿಂದ ನಾಯ್ಕ ಹೇಳಿಕೆ

ಭಟ್ಕಳ : ಕರ್ನಾಟಕ ಸರಕಾರದ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಬೆಂಗಳೂರಿನಿಂದ ಭಟ್ಕಳಕ್ಕೆ ಆಗಮಿಸುತ್ತಿರುವ ಗೋವಿಂದ್ ನಾಯ್ಕ್ ಅವರನ್ನು ಭಾರತೀಯ ಜನತಾ ಪಾರ್ಟಿ ಶಿರೂರು ಕಾರ್ಯಕರ್ತರ ವತಿಯಿಂದ ಶಿರೂರು ಪೇಟೆ ಸರ್ಕಲ್ ನಲ್ಲಿ ಸನ್ಮಾನಿಸಲಾಯಿತು.ಭಾರತೀಯ ಜನತಾ ಪಾರ್ಟಿ ಶಿರೂರು ಕಾರ್ಯಕರ್ತರ ವತಿಯಿಂದ ಶಿರೂರು ಪೇಟೆ ಸರ್ಕಲ್ ನಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಬದಲ್ಲಿ ಮಾತನಾಡಿದ ಅವರು  ಸಾಮಾನ್ಯ ಕಾರ್ಯಕರ್ತನಾದ ನನಗೆ ಈ ಸ್ಥಾನ ನೀಡುವ ಮೂಲಕ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಕೂಡ ಉನ್ನತ ಸ್ಥಾನ ಪಡೆಯಬಹುದು ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇರುವ ಸಮಯದಲ್ಲಿ ಕರಾವಳಿ ಭಾಗಕ್ಕೆವಿಶೇಷ ಅದ್ಯತೆ ನೀಡಿ ಗರಿಷ್ಟ ಸೇವೆ ಮಾಡುವ ಪ್ರಯತ್ಮ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಸಂಘಟಕ ಪ್ರಮುಖ್ ಸತೀಶ ಪ್ರಭು,ಗ್ರಾ.ಪಂ ಸದಸ್ಯರಾದ ಶಂಕರ ಮೇಸ್ತ,ಬಾಬು ಮೊಗೇರ್ ಅಳ್ವೆಗದ್ದೆ,ಸುರೇಂದ್ರ ದೇವಾಡಿಗ,ಸಂದ್ಯಾ ಪೂಜಾರಿ,ದಿ.ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕ ತುಳಸಿದಾಸ್ ಮೊಗೇರ್,ಆಕ್ರಮ -ಸಕ್ರಮ ಸಮಿತಿ ಸದಸ್ಯ ದಿನೇಶ್ ಕುಮಾರ್ ಶಿರೂರು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

WhatsApp
Facebook
Telegram
error: Content is protected !!
Scroll to Top