ಭಟ್ಕಳದಲ್ಲಿ ಎಲ್ಲೆಂದರಲ್ಲಿ ಅಮಾಯಕ ಜನರ ಮೇಲೆ ದಾಳಿ ಮಾಡುತ್ತಿರುವ ಹುಚ್ಚು ನಾಯಿಗಳ ಹಾವಳಿಯನ್ನು ತಡೆಗಟ್ಟಲು ಕೋರಿ ತಾಲೂಕಿ ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ವತಿಯಿಂದ ಪುರಸಭಾ ಮುಖ್ಯಾಧಿಕಾರಿಗಳಿಗೆ ಮನವಿ.
ಭಟ್ಕಳದಲ್ಲಿ ಇತ್ತೀಚೆಗೆ ಹಲವು ಕಡೆ ಹುಚ್ಚು ನಾಯಿಗಳು ಹಾಗು ಬೀದಿ ನಾಯಿಗಳು ಅಮಾಯಕ ಪುರುಷರ ಮೇಲೆ, ಮಹಿಳೆಯರ ಮೇಲೆ ಹಾಗೂ ಮಕ್ಕಳ ಮೇಲೆ ಆಕ್ರಮಣ ಮಾಡುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿರಬಹುದು. ಹಲವು ದಿನಗಳ ಹಿಂದೆಯೂ ಕೆಲವು ವ್ಯಕ್ತಿಗಳ ಮೇಲೆ ಹುಚ್ಚು ನಾಯಿಗಳು ದಾಳಿ ಮಾಡಿದ್ದು ಇಂದು ಸಹ ಒಂದು ಮಗುವೂ ಸೇರಿ ಮೂರು ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿರುತ್ತದೆ. ಹುಚ್ಚು ನಾಯಿಗಳ ಕಚ್ಚುವಿಕೆಯು ಬಹಳ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಆದುದರಿಂದ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅತಿ ಶ್ರೀಘ್ರದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇವೆ. ಇಲ್ಲವಾದಲ್ಲಿ ನಾವು ವೆಲ್ಫೇರ್ ಪಾರ್ಟಿಯ ವತಿಯಿಂದ ಪ್ರತಿಭಟನಾ ಧರಣಿಯನ್ನು ಕೈಕೊಳ್ಳುವುದಾಗಿ ತಮ್ಮ ಗಮನಕ್ಕೆ ತರುತ್ತಿದ್ದೇವೆ. ಎಂದು ಮನವಿಯನ್ನು ಸಲ್ಲಿಸಲಾಯಿತು
ಈ ಸಂದರ್ಬದಲ್ಲಿ ಭಟ್ಕಳ ವೆಲ್ಪೇರ್ ಪಾರ್ಟಿಯ ಅಧ್ಯಕ್ಷರು ಉಪಾಧ್ಯಕ್ಷರು ಪಧಾಧಿಕಾರಿಗಳು ಪುರಸಭಾ ಅಧ್ಯಕ್ಷ ಪರ್ವೆಜ್ ಕಾಶಿಮ್ ಮುಂತಾದವರು ಉಪಸ್ತಿತರಿದ್ದರು.