ಭಟ್ಕಳ:ತಾಲೂಕಿನ ಜನೋಪಕಾರಿ ಹಣಕಾಸು ಸಂಸ್ಥೆ ಎಂದು ಹೆಸರನ್ನು ಗಳಿಸಿರು ಮಹಾ ಗಣಪತಿ ಮಹಾಸತಿ ಸೌಹಾರ್ಧ ಪತ್ತಿನ ಸಹಕಾರಿ ಸಂಘ ನಿಯಮಿತ ಸರ್ಪನಕಟ್ಟೆ ಇದರ ನಾಲ್ಕನೆ ಶಾಖೆಯನ್ನು ಶಾಸಕ ಸುನಿಲ್ ನಾಯ್ಕ ಅವರು ಉದ್ಗಾಟಿಸಿದರು.
ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು ಎಮ್ ಜಿ ಎಮ್ ಒಂದು ಉತ್ತಮವಾಗಿ ಕಾರ್ಯ ನಿರ್ವಹಿಸುವ ಹಣಕಾಸು ಸಂಸ್ಥೆಯಾಗಿದೆ ಇದರ ನಾಲ್ಕನೆ ಶಾಕೆ ಇಂದು ಉದ್ಗಾಟನೆಯಾಗಿದೆ ಅದರಲ್ಲೂ ಇದೋಂದು ಮಹಿಳಾ ಶಾಖೆಯಾಗಿದೆ ಈ ಶಾಖೆಯು ಸಾರ್ವಜನಿಕರ ಸೇವೆಯಲ್ಲಿ ಪ್ರಾಮಾಣಿಕವಾಗಿ ದುಡಿಯುವಂತಾಗಲಿ ಎಂದು ಹೇಳಿದರು
ಈ ಸಂದರ್ಬದಲ್ಲಿ ಎಮ್ ಜಿ ಎಮ್ ಅಧ್ಯಕ್ಷರಾದ ಈರಪ್ಪ ಎಂ ಗರ್ಡಿಕರ್, ಉಪಾಧ್ಯಕ್ಷರಾದ ಎಂ ಜಿ ಅರುಣ್ ಕುಮಾರ್ , ಮುಖ್ಯ ಸಲಹೆಗಾರ ಐ.ಟಿ ನಾಯ್ಕ ಮತ್ತು ಆಡಳಿತ ಮಂಡಳಿಯ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು