ಭಟ್ಕಳ ತಾಲೂಕಿನಲ್ಲಿ ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ವತಿಯಿಂದ ಸುದ್ದಿಗೊಷ್ಟಿ

ಭಟ್ಕಳ: ಬಿಜೆಪಿ ಸರಕಾರದ ಇಂದಿನ ಸ್ಥಿತಿ ತುಂಬ ಶೋಚನೀಯ ಭಟ್ಕಳ ತಾಲೂಕಿನಲ್ಲಿ ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಡಾ:  ಎಸ್ ಕ್ಯೂ  ಆರ್  ಇಲಿಯಾಸ್ ಹೇಳಿಕೆ

ಭಟ್ಕಳ ತಾಲೂಕಿನ ಅಮೀನಾ ಪ್ಯಾಲೇಸ್‌ ಅಲ್ಲಿ ಹಮ್ಮಿಕೊಂಡ ಸುದ್ದಿಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಸರಕಾರ ಆಡಳಿತ ನೀತಿ ತುಂಬ ಕೆಟ್ಟದಾಗಿದ್ದು  ಕೊಮುವಾದಕ್ಕೆ ಒತ್ತು ನಿಡುವಂತದಾಗಿದೆ ಯಾವಾಗಲು  ಒಂದಿಲ್ಲೊಂದು ವಿವಾದವನ್ನು ಹುಟ್ಟುಹಾಕುತ್ತಿದೆ  ಮಕ್ಕಳ ಪಠ್ಯ ಪುಸ್ತಕವಾಗಿರ ಬಹುದು ಬುರ್ಕಾ ವಿವಾದ ಹೀಗೆ ಅನೇಕ ಸಮಸ್ಯೆಯನ್ನು ಹುಟ್ಟುಹಾಕುತ್ತಿದೆ .   ಅರ್ಥಕವಾಗಿ ತುಂಬ ಜರ್ಜರಿತವಾಗಿದೆ ಕಾರಣ ಬಿಜೆಪಿ ಸರಕಾರದ ಕಳಪೆ ಮಟ್ಟದ ಆಡಳಿತ ವ್ಯವಸ್ಥೆಯಾಗಿದೆ ಹೀಗೆ ಮುಂದುವರಿದಲ್ಲಿ ಆರ್ಥಿಕ ದಿವಾಳಯನ್ನು ದೇಶ ಎದುರಿಸಬೇಕಾಗುತ್ತದೆ ಎಂದು ಹೇಳಿದರು


 ಸುದ್ದಿಗೊಷ್ಟಿಯಲ್ಲಿ ರಾಜ್ಯ ಅಧ್ಯಕ್ಷ ತಾಹಿರ್‌ ಹುಸೇನ್‌ ಅವರು ಮಾತನಾಡಿ  ನಮ್ಮ‌ ರಾಜ್ಯದಲ್ಲಿ ರಾಜ್ಯದಲ್ಲಿಯು ಕೂಡ ಬಿಜೆಪಿ ಸರಕಾರ ಅರಾಜಕತೆಯನ್ನು ಹುಟ್ಟು ಹಾಕಿದೆ   ಮಕ್ಕಳ ಪಠ್ಯ ಪುಸ್ತಕದ ವಿಷಯದಲ್ಲಿ ಕೊಮುವಾದವನ್ನು ಬಿತ್ತುವ ಪ್ರಯತ್ನ ಮಾಡುತ್ತಿದೆ ಹಾಗು  ಉಚಿತವಾಗಿ ವಿತರಿಸುವ ಸೈಕಲ್ ಅನ್ನು ವಿತರಿಸುವುದು ನಿಲ್ಲಿಸಿದೆ ಹೀಗೆ ಅನೇಕ ವಿವಾದಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು

ಪತ್ರಿಕಾ ಗೋಷ್ಟಿಯಲ್ಲಿ ಕೆರಳದಲ್ಲಿ ಪಿ ಎಪ್‌ ಐ ಸಂಘನೆಯರ್ಯಾಲಿಯ ಸಂದರ್ಬದಲ್ಲಿ ಹತ್ತು ವರ್ಷದ ಮುಸ್ಲಿಂ ಬಾಲಕನ ಕೋಮು ದಳ್ಳುರು ಹತ್ತಿಸುವ ಸ್ಲೋಗನ್‌ ಬಗ್ಗೆ ಮಾಧ್ಯಮದವರು ಪ್ರಶ್ನೀಸಿದಾಗ ಕಾನೂನು ಭಾಹಿರವಾಗಿ ಸಂಘಟನೆ ಯಾಗಲಿ ವ್ಯಕ್ತಿಯಾಗಲಿ ನಡೆದುಕೊಂಡರೆ ಅದು ಶಿಕ್ಷಾರ್ಹ ಅಪರಾದ ಅವರಿಗೆ ಶಿಕ್ಷೇ ಆಗಲೆ ಬೇಕು ಎಂದು ರಾಜ್ಯ ಅಧ್ಯಕ್ಷ ತಾಹಿರ್‌ ಹುಸೇನ್‌ ಹೇಳಿದರು

ಈ ಸಂದರ್ಬದಲ್ಲಿ ರಾಷ್ಟ್ರೀಯ ಜನರಲ್‌ ಸೆಕ್ರೇಟರಿ ಸುಬ್ರಮಣಿ ಆರ್ಮುಗಮ್‌ , ರಾಜ್ಯ ಮಾಧ್ಯಮ ಸಲಹೆಗಾರ ಅಜೀಜ್‌ ಜಾಗಿರ್ದಾರ್‌ , ಜಿಲ್ಲಾ ಅಧ್ಯಕ್ಷ ಡಾ: ನಸಿಮ್‌ ಖಾನ್‌ , ಜಿಲ್ಲಾ ಜನರಲ್‌ ಸೆಕ್ರೇಟರಿ ಆಶೀಪ್‌ ಶೇಕ್‌, ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top