ಭಟ್ಕಳ ಬೆಳ್ಕೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ‌ದಿಂದ ಸುದ್ದಿಗೋಷ್ಟಿ

ಮೆ 15 ರಂದು ಬೆಳ್ಕೆಯಲ್ಲಿ ನಮ್ಮ ಸಂಘದ ನೂತನ ಕಟ್ಟಡ ಸಹಕಾರಿ ಸೌದದ ಉದ್ಗಾಟನೆ ನಡೆಯಲ್ಲಿದೆ ಅಧ್ಯಕ್ಷ ಮಂಜುನಾಥ ನಾಯ್ಕ ಘೋಷಣೆ

ಭಟ್ಕಳ: ತಾಲೂಕಿನ ಸಾರ್ವಜನಿಕರ ಗ್ರಾಹಕರ ಸಹಕಾರದಿಂದ ನಮ್ಮ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ‌ ನಿಯಮಿತದ ಸಹಕಾರಿ ಸೌದ ಇದೆ ಬರುವ ಮೇ 15 ಕ್ಕೆ ಉದ್ಘಾಟನೆಯಾಗಲಿದೆ ಎಂದು ಬೆಳ್ಕೆ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಲಚ್ಮಯ್ಯ ನಾಯ್ಕ ಹೇಳಿದರು.

ತಾಲೂಕಿನ ಬೆಳ್ಕೆ ಗ್ರಾಮದಲ್ಲಿ ಪ್ರತಿಷ್ಟಿತ ಗ್ರಾಮೀಣ  ವ್ಯವಸಾಯ ಸೇವಾ ಸಹಕಾರಿ ಸಂಘ‌ ನಿಯಮಿತದ ಸಹಕಾರಿ ಸೌದದ ಉದ್ಗಾಟನೆಯ ಹಿನ್ನೆಲೆಯಲ್ಲಿ ಕರೆದ ಸುದ್ದಿಘೊಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ನಮ್ಮ‌ ಸಹಕಾರಿ ಸೌದ ಉದ್ಗಾಟನೆಗೆ ಸಿದ್ದವಾಗಿ ನಿಂತಿದೆ ಇದಕ್ಕೆ ಕಾರಣ ಸಾರ್ವಜನಿಕರು ಹಾಗು ನಮ್ಮ ಗ್ರಾಹಕರೆ ಕಾರಣ ಮೆ 15 ರಂದು ನಮ್ಮ ನಾಮಧಾರಿ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳ ಅಮೃತ ಹಸ್ತದಿಂದ ಉದ್ಗಾಟನೆಯಾಗಲಿದೆ ಸ್ವಾಮೀಜಿಗಳನ್ನು ಪೂರ್ಣಕುಂಭ ಮೇಳದ ಮೆರವಣಿಗೆಯ ಮೂಲಕ ಸ್ವಾಗತಿಸಲಾಗುವುದು ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರ ಸಹಿತ ಎಲ್ಲಾ ಗಣ್ಯಾತಿಗಣ್ಯರು ಆಗಮಿಸುವವರಿದ್ದಾರೆ ಸಹಕಾರ ಸೌದದ ಉದ್ಘಾಟನೆಯ ನಂತರ ಮದ್ಯಾನಃ ಭೊಜನ ಕೂಟ ಸಂಜೇ ಝೇಂಕಾರ ಮೇಲೋಡೀಸ್ ಭಟ್ಕಳ ಇವರಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ರಾತ್ರಿ 9 30 ಕ್ಕೆ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ ಹೀಗೆ ಅನೇಕ ಕಾರ್ಯಕ್ರಮ ನಡೆಯಲಿದೆ ಸಾರ್ವಜನಿಕರು ಮತ್ತು ನಮ್ಮ ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕು ಎಂದು ವಿನಂತಿಸಿಕೊಂಡರು

ಪತ್ರಿಕಾ ಗೋಷ್ಟಿಗೆ ಆಗಮಿಸಿ ಪತ್ರಕರ್ತರನ್ನು ನಿರ್ದೇಶಕರುಗಳನ್ನು ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಅಣ್ಣಪ್ಪ ನಾಯ್ಕ ಸ್ವಾಗತಿಸಿದರು

ಈ ಸಂದರ್ಬದಲ್ಲಿ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕರುಗಳಾದ ವಾಸು ನಾರಾಯಣ ನಾಯ್ಕ ಕ್ರಷ್ಣ ರಾಮ ಮೋಗೇರ್ ಪಾಂಡುರಂಗ ನಾರಾಯಣ ನಾಯ್ಕ , ದೇವಯ್ಯ ದುರ್ಗಪ್ಪ ನಾಯ್ಕ ನಾಗೇಶ ದುರ್ಗಪ್ಪ ನಾಯ್ಕ ದೇವಾನಂದ ಮಂಜು ಮೊಗೇರ್ ರಮೇಶ ಸಣ್ಣು ಗೊಂಡ ವೆಂಕ್ಟೇಶ ಜೋಗಿ ನಾಯ್ಕ, ಲಲಿತಾ ಕೊರ್ಗ ನಾಯ್ಕ , ಜ್ಯೋತಿ ಪರಮೇಶ್ವರ ನಾಯ್ಕ ಮತ್ತು ಮುಂತಾದವರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top