ಭಟ್ಕಳ ಶೇಡಗೇರಿ ಗೋಳಿ ಕುಂಬ್ರಿಯಲ್ಲಿ ಯುವತಿ ಮನನೊಂದು ಆತ್ಮಹತ್ಯೆ

ಭಟ್ಕಳ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಶೇಡಗೇರಿ ಗೋಳಿ ಕುಂಬ್ರಿಯಲ್ಲಿ ನಡೆದಿದೆ

ಆತ್ಮಹತ್ಯೆ ಮಾಡಿಕೊಂಡ  ಯುವತಿಯನ್ನು ದೀಪಿಕಾ ಗೋವಿಂದ ನಾಯ್ಕ (17) ಮುರುಡೇಶ್ವರ ಬೀನಾ ವೈದ್ಯ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದಳು. ಈಕೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ತಮ್ಮ ತೋಟದ ಮೇಲ್ಭಾಗದಲ್ಲಿರುವ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಯುವತಿ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಮೃತ ಯುವತಿಯ ತಂದೆ ಪ್ರಕರಣ ದಾಖಲಿದ್ದಾರೆ.

WhatsApp
Facebook
Telegram
error: Content is protected !!
Scroll to Top