ಭಟ್ಕಳ ಚೌತನಿ ಕಾಸ್ಮುಡಿ  ಹನುಮಂತ ಸ್ವಯಂವರ ಕಲ್ಯಾಣ ಮಂಟಪ ಲೊಕಾರ್ಪಣೆ

ಕಲ್ಯಾಣ ಮಂಟಪ ಲೊಕಾರ್ಪಣೆ ಮಾಡಿದ ಶಾಸಕ ಸುನಿಲ್ ನಾಯ್ಕ

ಭಟ್ಕಳ ತಾಲೂಕ ಚೌತನಿ ಕಾಸ್ಮುಡಿ ಹನುಮಂತ ದೇವಸ್ಥಾನ  ಸ್ವಯಂವರ ಕಲ್ಯಾಣ ಮಂಟಪವನ್ನು ಶಾಸಕ ಸುನಿಲ್ ನಾಯ್ಕ ಲೊಕಾರ್ಪಣೆ ಮಾಡಿದರು

ಕಲ್ಯಾಣ ಮಂಟಪ ಉದ್ಗಾಟನೆ ಮಾಡಿ ಮಾತನಾಡಿದ  ಶಾಸಕ ಸುನಿಲ್ ನಾಯ್ಕ ಮಾತನಾಡಿ ಸೇವಾ ಮನೋಭಾವಗಳಿದ್ದರೆ ಮಾತ್ರ ಅದ್ಬುತಗಳನ್ನು ಸಾದಿಸಬಹುದು ಇದಕ್ಕೆ ಅಣ್ಣಪ್ಪ ನಾಯ್ಕ ಹಾಗು ಈರಪ್ಪ ಗರ್ಡಿಕರ್ ಅವರ ಶ್ರಮಗಳಿಂದ ಇಂದು ಇಂಥ ಭವ್ಯವಾದ ಕಲ್ಯಾಣ ಮಂಟಪ ನಿರ್ಮಾಣವಾಗಿದೆ ಎಂದು ಹೇಳಬಹುದಾಗಿದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಪ್ರದೀಪ ಕುಮಾರ್ ಶೆಟ್ಟಿ ಮಾತನಾಡಿ ಸೇವಾ ಮನೊಭಾವನೆ ಸಮಾಜ ಮುಖಿ ಕಾರ್ಯಗಳಿಂದ ಸಮಾಜ ಕಟ್ಟುವ ಕೆಲಸವಾಗುತ್ತದೆ ಈ ಕಲ್ಯಾಣ ಮಂಟಪ್ಪ ಕಟ್ಟುವಲ್ಲಿ ಕರ ಸೇವಕ ಶ್ರಮವೆ ಮುಖ್ಯವಾಗಿ ಆ ಎಲ್ಲಾ ಕರಸೇವಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿ ಗೌರವ ಅಧ್ಯಕ್ಷರಾದ ಈರಪ್ಪ ಗರ್ಡಿಕರ್ ಅಧ್ಯಕ್ಷರಾದ ಅಣ್ಣಪ್ಪ ನಾಯ್ಕ ಪ್ರಕಾಶ ನಾಯ್ಕ ಅರೆಬೈಲ್ ಗಜಾನನ ಆಚಾರ್ಯ , ವಕೀಲರಾದ ಪ್ರದೀಪ ಕುಮಾರ್ ಶೆಟ್ಟಿ, ಮುಂತಾದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು

ಸನ್ಮಾನ ಸ್ವಿಕರಿಸಿದ ಪ್ರಕಾಶ ನಾಯ್ಕ ಅರೆಬೈಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೇವಸ್ತಾನ ಕಮಿಟಿಯ ಅಧ್ಯಕ್ಷರಾದ ಅಣ್ಣಪ್ಪ ಅಬ್ಬಿಹಿತ್ಲು ಅವರು ಬಂದಂತ ಅಥಿತಿಗಳನ್ನು ಸ್ವಾಗತ ಮಾಡಿದರೆ ಪರಮೇಶ್ವರ ನಾಯ್ಕ ಕಾರ್ಯಕ್ರಮದ ನಿರೂಪಣೆ ಮಾಡಿದರು ಮತ್ತು ಕಾರ್ಯಕ್ರಮದ ಕೊನೆಯಲ್ಲಿ ಸ್ವಯಂವರ ಕಲ್ಯಾಣ ಮಂಟಪ ಸಮಿತಿಯ ಗೌರವಾಧ್ಯಕ್ಷ ಕೇಶವ ಆಚಾರ್ಯ ವಂದನಾರ್ಪಣೆ ನಡೆಸಿಕೊಟ್ಟರು

ಈರಪ್ಪ ಗರ್ಡಿಕರ್, ವಕೀಲರಾದ ಪ್ರದೀಪ ಶೆಟ್ಟಿ, ನಾಮದಾರಿ ಗುರುಮಠದ ಅಧ್ಯಕ್ಷರಾದ ಕ್ರಷ್ಣ ನಾಯ್ಕ ಆಸರಕೇರಿ, ಎಚ್ ಆರ್ ನಾಯ್ಕ ಕುಮಟಾ, ಬಾಲಕ್ರಷ್ಣ ಭಟ್ , ಕೇಶವ ಆಚಾರ್ಯ , ಪ್ರಕಾಶ ಅರೆಬೈಲ್ ಕುಮಟಾ, ಮೃತ್ಯುಂಜಯ ಆಚಾರ್ಯ , ಯಲ್ವಡಿಕವೂರ್ ಪಂಚಾಯತ್ ಆಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ , ಗಣಪತಿ ಗೊಂಡ ,  ಕ್ರಷ್ಣಪ್ಪ ನಾಯ್ಕ , ಸುಬ್ರಾಯ ನಾಯ್ಕ ಗಣಪತಿ ನಾಯ್ಕ , ಬಾಸ್ಕರ್ ನಾಯ್ಕ, ಡಿ.ಬಿ ನಾಯ್ಕ , ಚಂದ್ರು ನಾಯ್ಕ, ಮುಂತಾದವರು ಉಪಸ್ಥಿತರಿದ್ದರು,

WhatsApp
Facebook
Telegram
error: Content is protected !!
Scroll to Top