ಮಗನ ಚಿಕಿತ್ಸೆಗೆ ಹಣವಿಲ್ಲದೆ ಮತಾಂತರಗೊಳ್ಳಲು ನಿರ್ಧರಿಸಿದ ವಿಜಯಪುರದ ಹಿಂದೂ ಕುಟುಂಬ!

ಈರಣ್ಣ ನಾಗೂರ ಹಾಗೂ ಸವಿತಾ ನಾಗೂರ ದಂಪತಿಯ ಕುಟುಂಬ ಬಡತನದಲ್ಲಿದ್ದರೂ ಕೂಡ ಹೃದಯವಂತಿಕೆಯಲ್ಲಿ ಶ್ರೀಮಂತವಾಗಿತ್ತು. ಈರಣ್ಣ ಡಾಬಾವೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡಿದರೆ, ಇತ್ತ ಅವರ ಪತ್ನಿ ಸವಿತಾ ಕೂಲಿ ಕೆಲಸ ಮಾಡುತ್ತ ಸಂಸಾರದ ಬಂಡಿ ಸಾಗಿಸುತ್ತಿದ್ದಾರೆ. ಎರಡು ಹೆಣ್ಣು ಮತ್ತು ಒಂದು ಗಂಡು ಮಗುವನ್ನು ಹೊಂದಿರುವ ಈ ಕುಟುಂಬ ಈಗ ಕಳೆದ ಎರಡೂವರೆ ವರ್ಷದಿಂದ ಸಂಕಷ್ಟಕ್ಕೆ ಸಿಲುಕಿದೆ. ತನ್ನ ಮಗನ ದೇಹಕ್ಕೆ ವಕ್ಕರಿಸಿಕೊಂಡಿರುವ ಅಪರೂಪದ ಕಾಯಿಲೆ ವಾಸಿ ಮಾಡಲೆಂದು ಇಲ್ಲಸಲ್ಲದ ದೇವರಿಗೆಲ್ಲ ಹರಕೆ ಹೊತ್ತಿದ್ದಾರೆ.

ವಿಜಯಪುರ: ಬಡತನ ಎಂಬುದು ಕೆಲವರ ಪಾಲಿಕೆ ಎಷ್ಟೊಂದು ಶಾಪವಾಗಿ ಪರಿಣಮಿಸುತ್ತದೆ ಅನ್ನೋದು ಅದನ್ನು ಎದುರಿಸಿದವರಿಗಷ್ಟೇ ಗೊತ್ತಿರುತ್ತದೆ. ಇಲ್ಲೊಂದು ಬಡ ಕುಟುಂಬ ತಮ್ಮ ಮಗನ ಚಿಕಿತ್ಸೆ ಹಣ ಹೊಂದಿಸಲಾಗದೆ ಅನಿವಾರ್ಯವಾಗಿ  ಆಗುವ ನಿರ್ಧಾರಕ್ಕೆ ಬಂದು ನಿಂತಿದೆ ಅಂದರೆ ನಂಬಲೇಬೇಕು.

ಹೌದು.. ಸಂತೋಷವಾಗಿರಬೇಕಿರುವ ಕುಟುಂಬವದು. ಆದರೆ, ಈ ಕುಟುಂಬದ ಕುಡಿಗೆ ವಕ್ಕರಿಸಿರುವ ಕಾಯಿಲೆ ಈ ಕುಟುಂಬದ ನೆಮ್ಮದಿಯನ್ನೇ ಕೆಡಿಸಿದೆ. ಮಗನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಬಡಪಾಯಿ ತಂದೆ ಈಗ ಧರ್ಮ ತೊರೆದು ಮತಾಂತರವಾಗಲು ನಿರ್ಧರಿಸಿದ್ದಾರೆ. ತಮ್ಮ ಮಗನ ಚಿಕಿತ್ಸೆಗಾಗಿ ಹಲವರ ಬಳಿ ಪರಿಪರಿಯಾಗಿ ಬೇಡಿಕೊಂಡರೂ ಯಾರೂ ಕುಡ ಸ್ಪಂದಿಸದ ಹಿನ್ನೆಲೆ ಇದೀಗ ತನಗೆ ನೆರವಾಗುವ ಧರ್ಮಕ್ಕೆ ಮತಾಂತರವಾಗುವುದಾಗಿ ತುಂಬಾ ನೋವಿನಿಂದಲೇ ನಿರ್ಧಾರ ತೆಗೆದುಕೊಂಡಿದ್ದಾರೆ. ಮಗನ ಜೀವ ಉಳಿಸುವ ಸಲುವಾಗಿ ಹಿಂದೂ ಧರ್ಮವನ್ನು ತೊರೆದು ಬೇರೆ ಧರ್ಮಕ್ಕೆ ಮತಾಂತರ ಹೊಂದುವ ಕುರಿತು ಚಿಂತನೆ ನಡೆಸಿದ್ದಾರೆ.

ಬಸವನಾಡು ವಿಜಯಪುರ  ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಇರುವ ಈರಣ್ಣ ನಾಗೂರ ಹಾಗೂ ಸವಿತಾ ನಾಗೂರ ದಂಪತಿಯ ಕುಟುಂಬ ಬಡತನದಲ್ಲಿದ್ದರೂ ಕೂಡ ಹೃದಯವಂತಿಕೆಯಲ್ಲಿ ಶ್ರೀಮಂತವಾಗಿತ್ತು. ಈರಣ್ಣ ಡಾಬಾವೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡಿದರೆ, ಇತ್ತ ಅವರ ಪತ್ನಿ ಸವಿತಾ ಕೂಲಿ ಕೆಲಸ ಮಾಡುತ್ತ ಸಂಸಾರದ ಬಂಡಿ ಸಾಗಿಸುತ್ತಿದ್ದಾರೆ. ಎರಡು ಹೆಣ್ಣು ಮತ್ತು ಒಂದು ಗಂಡು ಮಗುವನ್ನು ಹೊಂದಿರುವ ಈ ಕುಟುಂಬ ಈಗ ಕಳೆದ ಎರಡೂವರೆ ವರ್ಷದಿಂದ ಸಂಕಷ್ಟಕ್ಕೆ ಸಿಲುಕಿದೆ. ತನ್ನ ಮಗನ ದೇಹಕ್ಕೆ ವಕ್ಕರಿಸಿಕೊಂಡಿರುವ ಅಪರೂಪದ ಕಾಯಿಲೆ ವಾಸಿ ಮಾಡಲೆಂದು ಇಲ್ಲಸಲ್ಲದ ದೇವರಿಗೆಲ್ಲ ಹರಕೆ ಹೊತ್ತಿದ್ದಾರೆ. ಮಗನನ್ನು ಹೇಗಾದರೂ ಮಾಡಿ ಈ ಅಪಾಯದಿಂದ ಪಾರು ಮಾಡಿಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಯಾರೊಬ್ಬರೂ ಇವರ ನೋವಿಗೆ ಸ್ಪಂದಿಸಿಲ್ಲ. ಹೀಗಾಗಿ ಈ ಕುಟುಂಬ ಕಠಿಣ ನಿರ್ಧಾರಕ್ಕೆ ಬಂದಿದೆ.

ಅಂದಹಾಗೆ, ನಾಗೂರ ದಂಪತಿಯ ಮೂರು ವರ್ಷದ ಮಗ ಕಾರ್ತಿಕ್‌ಗೆ ಇತ್ತೀಚೆಗೆ ಅಪರೂಪದ ಕಾಯಿಲೆಯಾದ ಥಲಸ್ಸಿಮಿಯಾ (thalassemia) ಅಂದರೆ ರಕ್ತಹೀನತೆ ದೃಢಪಟ್ಟಿದೆ‌.‌‌ ಹೀಗಾಗಿ ಈ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಈ ಕುಟುಂಬ ಹರಸಾಹಸ ಪಡುತ್ತಿದೆ‌‌‌. ರಕ್ತ ಸಂಬಂಧಿಗಳಲ್ಲಿ ವಿವಾಹವಾದರೆ ಈ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತದೆ. ಈ ರೋಗದಿಂದಾಗಿ ಮಗುವಿನ ಮುಖ, ಕಣ್ಣುಗಳು, ಬಾಯಿಗೆ ಇನ್ನಿಲ್ಲದ ಕಾಟ ಕೊಡುತ್ತಿದೆ.

‘ಮಗ ಕಾರ್ತಿಕ್‌ಗೆ ಪ್ರತಿ ತಿಂಗಳು ರಕ್ತ ಹಾಕಿಸಬೇಕು, ಈಗಾಗಲೇ 32 ಬಾರಿ ರಕ್ತ ಹಾಕಿಸಿದ್ದು, ಇಲ್ಲಿಯವರೆಗೆ ರೂ. 2 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದೇವೆ. ಈಗ ಪ್ರತಿಬಾರಿ ರಕ್ತ ಬದಲಾಯಿಸಲು ಹಣ ಬೇಕು. ಆರ್ಥಿಕ ಸಮಸ್ಯೆ ನೀಗಿಸಲು ಹಣದ ಕೊರತೆಯಿದೆ. ತಮಗೆ ಯಾವುದೇ ಆಸ್ತಿಪಾಸ್ತಿ ಇಲ್ಲ. ಪ್ರತಿ ಬಾರಿ ಐದರಿಂದ ಆರು ಸಾವಿರ ರೂಪಾಯಿ ಖರ್ಚು ಮಾಡಬೇಕು. ಎರಡು ಹೆಣ್ಣು ಮಕ್ಕಳ ಶಾಲೆ, ಮತ್ತಿತರೆ ಖರ್ಚು ತಮಗೆ ಹೊರೆಯಾಗುತ್ತಿದೆ. ಈಗಾಗಲೇ ಮಣಿಪಾಲ, ಬೆಳಗಾವಿ, ಬೆಂಗಳೂರು ಹೀಗೆ ಹತ್ತು ಹಲವು ಆಸ್ಪತ್ರೆಗೆ ತಿರುಗಾಡಿ ಬಂದಿರುವ ಇವರಿಗೆ ಮುಂದೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಅಷ್ಟೇ ಅಲ್ಕ, ಈ ರೋಗ ವಾಸಿಯಾಗಲು ಬೋನ್ ಮ್ಯಾರೋ ಆಪರೇಷನ್ ಮಾಡಿಸಲು ರೂ. 10 ಲಕ್ಷ ಖರ್ಚು ಮಾಡಬೇಕಾಗಿದೆ. ಇದರಿಂದಾಗಿ‌ ಬೇರೆ ಏನೂ ತೋಚದೇ ತಮ್ಮ ಮಗನ ಮುಂದಿನ ಭವಿಷ್ಯ ಹೇಗೆ’ ಎನ್ನುವ ಚಿಂತೆಯಲ್ಲಿದ್ದಾರೆ ಈ ದಂಪತಿ.

ಪ್ರತಿ ತಿಂಗಳು ಹಣ ಖರ್ಚು ಮಾಡಿ ರೋಸಿ ಹೋದ ಈ ಕುಟುಂಬ ಕಂಡ ಕಂಡವರಲ್ಲಿ ಸಹಾಯ ಹಸ್ತ ಕೇಳಿದೆ. ಯಾರು ಸಹಾಯ ಮಾಡಲು‌ ಮುಂದೆ ಬಾರದ ಕಾರಣ ಈ ಕುಟುಂಬ ತಮಗೆ ಹಿಂದೂ ಧರ್ಮದಲ್ಲಿ ಸಹಾಯ ಸಿಗುತ್ತಿಲ್ಲ.‌ ಅಲ್ಲದೇ, ಸರಕಾರದ ಯಾವುದೇ ಯೋಜನೆಗಳು ತಮ್ನ ಮಗನಿಗೆ ಐದು ವರ್ಷವಾಗುವವರೆಗೆ ಅನ್ವಯಿಸದೇ ಇರುವುದರಿಂದ ಇವರನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಬೇರೆ ಧರ್ಮದವರು ಮಗನ ಚಿಕಿತ್ಸೆಗೆ ನೆರವಾದರೆ ಇಡೀ ಕುಟುಂಬ ಮತಾಂತರವಾಗಲು ನಿರ್ಧರಿಸಿದೆ. ಒಂದು ವೇಳೆ ತಮಗೆ ಇಲ್ಲಿಯೇ ಸಹಾಯವಾದರೆ ಮತಾಂತರವಾಗದಿರಲೂ ಕೂಡ ನಿಶ್ಚಯಿಸಿದೆ. ಮಗನ ಜೀವ ಉಳಿಸುವ ದೃಷ್ಟಿಯಿಂದ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಈ ಕುಟುಂಬ ತಿಳಿಸಿದೆ.

WhatsApp
Facebook
Telegram
error: Content is protected !!
Scroll to Top