ಭಟ್ಕಳ; ಮರೆಯದ ಮಾಣಿಕ್ಯ ಕರ್ನಾಟಕ ರತ್ನ ಪುನೀತ್ ರಾಜಕುಮಾರ ಅವರ ಜನ್ಮದಿನದ ಪ್ರಯುಕ್ತ ಸ್ನೇಹ ವಿಶೇಷ ಮಕ್ಕಳ ಶಾಲೆ,ಭಟ್ಕಳದ ಮಕ್ಕಳಿಗೆ ಊಟ ಮತ್ತು ದಿನ ನಿತ್ಯದ ಬಳಕೆಯ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಪುನೀತ್ ರಾಜಕುಮಾರ ಅವರ ಜನ್ಮ ದಿನದ ಪ್ರಯುಕ್ತ ಇಂದು ಯುವ ಉದ್ಯಮಿಗಳು ಧಾನಿಗಳು YOUNG ONE INDIA ಕಂಪನಿಯ ಮಾಲಿಕರಾದ ಶ್ರೀ ಮಾಸ್ತಪ್ಪ ಮಂಜಪ್ಪ ನಾಯ್ಕ,ದೊಡ್ಡಬಲಸೆ ಇವರು ಸ್ನೇಹ ವಿಶೇಷ ಮಕ್ಕಳ ಶಾಲೆ ,ಭಟ್ಕಳದ ಮಕ್ಕಳಿಗೆ ಊಟ ಹಾಗೂ ದಿನಬಳಕೆಯ ವಸ್ತುಗಳನ್ನು ನೀಡಿ ಅಪ್ಪು ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಣೆಮಾಡಿದರು.
ಮಾಸ್ತಪ್ಪ ಮಂಜಪ್ಪ ನಾಯ್ಕ ಹಾಗೂ ದೊಡ್ಡಬಲಸೆ ಇವರ ಸಾಮಾಜಿಕ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.