ಉಡುಪಿ : ಉದ್ಯಾವರದ ಯುವಕನೋರ್ವ ತಮ್ಮಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟ ಘಟನೆ ಭಾನುವಾರ ನಡೆದಿದೆ.
ಶನಿವಾರ ತಡ ರಾತ್ರಿವರೆಗೆ ಕಟಪಾಡಿ ಕಂಬಳ ವೀಕ್ಷಿಸಿ ಮನೆಗೆ ಬಂದ ಸಚಿನ್(26) ಎಂಬವರು ಭಾನುವಾರ ಬೆಳಗಿನ ಜಾವ ತಮ್ಮಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸಹೋದರ ಮತ್ತು ನೆರೆಮನೆಯ ಯುವಕರೊಂದಿಗೆ ಕಟಪಾಡಿ ಬೀಡು ಕಂಬಳ ನೋಡಲು ಹೋಗಿದ್ದ ಸಚಿನ್ ಪಕ್ಕದ ಸಂಬಂಧಿಕರ ಮನೆಯ ಜಗಲಿಯಲ್ಲಿ ಕುಳಿತಿರುವುದನ್ನು ನೋಡಿದ್ದರು. ಆದರೆ ಬಳಿಕ ನಾಪತ್ತೆಯಾಗಿದ್ದರು.
ಸಚಿನ್ ಅವರ ಮನೆಯ ಬಾವಿಯ ಹಗ್ಗ ಬಾವಿಯೊಳಗೆ ಇರುವುದನ್ನು ಕಂಡು ತಕ್ಷಣ ಮುಳುಗು ತಜ್ಞ ಈಶ್ವರ್ ಮಲ್ಪೆ ಮಾಹಿತಿ ನೀಡಲಾಯಿತು. ಅವರು ಬಾವಿಗಿಳಿದು ನೋಡಿದಾಗ ಸಚಿನ್ ಮೃತ ದೇಹ ಪತ್ತೆಯಾಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವಿವಾಹಿತರಾದ ಸಚಿನ್, ತಂದೆ ತಾಯಿ ಹಾಗೂ ಸಹೋದರನ್ನು ಅಗಲಿದ್ದಾರೆ.