Duniya Vijay ನಟನೆ, ನಿರ್ದೇಶನದ ಹೊಸ ಚಿತ್ರ ‘ಭೀಮ

ದುನಿಯಾ ವಿಜಯ್‌ (Duniya Vijay) ಮಹಾಶಿವರಾತ್ರಿ (Mahashivratri) ಹಬ್ಬದ ಪ್ರಯುಕ್ತ ತಮ್ಮ ನಟನೆ, ನಿರ್ದೇಶನದ ಹೊಸ ಚಿತ್ರದ ಟೈಟಲ್‌ ಬಿಡುಗಡೆ (Title Launch) ಮಾಡಿದ್ದಾರೆ. ಚಿತ್ರದ ಹೆಸರು ‘ಭೀಮ’ (Bheema). ‘ಕೆಣಕದೆ ಇದ್ದರೆ ಕ್ಷೇಮ’ ಎಂಬುದು ಚಿತ್ರದ ಉಪ ಶೀರ್ಷಿಕೆ. ಈ ಚಿತ್ರಕ್ಕೆ ನಿರ್ಮಾಪಕರಾಗಿ ಕೃಷ್ಣ ಸಾರ್ಥಕ್‌ (Krishna Sarthak) ಹಾಗೂ ಜಗದೀಶ್‌ ಗೌಡ (Jagadeesh Gowda) ಜತೆಯಾಗಿದ್ದಾರೆ. ಕತೆ, ಚಿತ್ರಕಥೆ ವಿಜಯ್‌ ಅವರೇ ಬರೆಯುತ್ತಿದ್ದಾರೆ. ಸಂಭಾಷಣೆಕಾರರಾಗಿ ಮಾಸ್ತಿ (Maasthi) ಇದ್ದಾರೆ. ಶಿವಸೇನಾ ಕ್ಯಾಮೆರಾ, ಚರಣ್‌ರಾಜ್‌ ಸಂಗೀತ ಸಂಯೋಜನೆ ಇದೆ.

‘ನನ್ನ ಮೊದಲ ನಿರ್ದೇಶನದ ‘ಸಲಗ’ ಚಿತ್ರಕ್ಕೆ ಪ್ರೇಕ್ಷಕರು ಕೊಟ್ಟ ಗೆಲುವನ್ನು ನಾನು ಯಾವತ್ತೂ ಮರೆಯಲ್ಲ. ಅದೇ ಪ್ರೀತಿ ಮತ್ತು ಅಭಿಮಾನದಿಂದ ಮತ್ತೊಂದು ಸಿನಿಮಾ ಶುರು ಮಾಡಿದ್ದೇವೆ. ರಕ್ತ, ಲಾಂಗಿನ ಚಿತ್ರಣಗಳನ್ನು ಒಳಗೊಂಡ ಸಿನಿಮಾ ಅಲ್ಲ ನಮ್ಮದು. ಡಾರ್ಕ್ ಲೋಕದ ಕತೆಯಾದರೂ ಅದನ್ನು ತೆರೆ ಮೇಲೆ ನೋಡುವ ಪ್ರೇಕ್ಷಕನಿಗೆ ಬ್ರೈಟ್‌ ಲೋಕದ ದರ್ಶನವಾಗುತ್ತದೆ. ಆ ಮಟ್ಟಿಗೆ ಪಾಸಿಟಿವ್‌ ಕತೆ ಹೇಳಬೇಕು ಎಂಬುದು ನನ್ನ ಆಸೆ. ಏಳೆಂಟು ತಿಂಗಳುಗಳಿಂದ ಚಿತ್ರದ ಕೆಲಸ ಆರಂಭವಾಗಿದೆ. ಈ ನಡುವೆ ನಾನು ತೆಲುಗು (Telugu) ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಒಂದು ವಾರ ಶೂಟಿಂಗ್‌ ಆಗಿದೆ. ತೆಲುಗು ಸಿನಿಮಾ ಶೂಟಿಂಗ್‌ ಜತೆಗೆ ‘ಭೀಮ’ ಚಿತ್ರದ ಬರವಣಿಗೆ ಕೆಲಸ ಕೂಡ ನಡೆಯಲಿದೆ’ ಎನ್ನುತ್ತಾರೆ ವಿಜಯ್‌.

ಸಲಗ’ ಚಿತ್ರದಲ್ಲಿ ರೌಡಿಸಂನ ಕಥೆಯನ್ನು ತೆರೆಮೇಲೆ ದುನಿಯಾ ವಿಜಯ್ ತೋರಿಸಿದ್ದರು. ಈ ಸಿನಿಮಾ ಬಗ್ಗೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅನೇಕ ಸ್ಟಾರ್​ ನಟರು ಈ ಚಿತ್ರವನ್ನು ಹೊಗಳಿದ್ದರು. ಈ ಯಶಸ್ಸಿನಿಂದ ವಿಜಯ್​ ಅವರ ಕಾನ್ಫಿಡೆನ್ಸ್​ ಹೆಚ್ಚಿದೆ. ಹೀಗಾಗಿ, ‘ಭೀಮ’ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಬಗ್ಗೆ ದುನಿಯಾ ವಿಜಯ್ ಸಾಮಾಜಿಕ ಜಾಲತಾಣದಲ್ಲಿ (Social Media) ಫಸ್ಟ್‌ಲುಕ್ (First Look) ಪೋಸ್ಟ್‌ವೊಂದನ್ನು ಈ ಹಿಂದೆ ಹಂಚಿಕೊಂಡಿದ್ದರು.  

ದುನಿಯಾ ವಿಜಯ್ ಟ್ವೀಟ್ಟರ್‌ನಲ್ಲಿ (Twitter) ‘ತಮ್ಮ ನಟನೆಯ 28ನೇ ಸಿನಿಮಾದ ಫಸ್ಟ್‌ಲುಕ್ ಪೋಸ್ಟರನ್ನು ಶೇರ್ ಮಾಡಿಕೊಂಡಿದ್ದು, ‘ಮತ್ತೊಮ್ಮೆ ನಿಮ್ಮ ಆಶೀರ್ವಾದದೊಂದಿಗೆ’ ಎಂದು ಬರೆದುಕೊಂಡಿದ್ದರು. ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೊಸ ಪೋಸ್ಟರ್​ನಲ್ಲಿ ಕೈ ಹಾಗೂ ಯಮಹಾ ಆರ್​ಎಕ್ಸ್​ 100 ಬೈಕ್​ ತೋರಿಸಲಾಗಿತ್ತು. ಪೋಸ್ಟರ್​ನಲ್ಲಿರುವ ದುನಿಯಾ ವಿಜಯ್ ಕೈ ರಕ್ತಸಿಕ್ತವಾಗಿತ್ತು. ಇದರಿಂದ ಇದು ಕೂಡ ರೌಡಿಸಂ ಕಥೆ ಎಂಬುದು ಸ್ಪಷ್ಟವಾಗಿದ್ದು, ಈ ಮೂಲಕ ಸಿನಿಮಂದಿಯ ಕುತೂಹಲವನ್ನು ಹೆಚ್ಚಿಸಿದ್ದರು.

ಇತ್ತೀಚೆಗಷ್ಟೇ ನಡೆದ ‘ಸಲಗ’ ಸಿನಿಮಾ ಸಕ್ಸಸ್​ ಮೀಟ್​ನಲ್ಲಿ ದುನಿಯಾ ವಿಜಯ್ ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದ್ದರು. ‘ದೇವರಾಣೆ ಸತ್ಯ ಹೇಳುತ್ತೇನೆ. ‘ಸಲಗ’ ಸಿನಿಮಾವನ್ನು ನಿರ್ಮಿಸುವಂತೆ ಕೆ.ಪಿ.ಶ್ರೀಕಾಂತ್ (KP Srikanth) ಅವರನ್ನು ಕೇಳಲು ಹೋದಾಗ ನನ್ನ ಬಳಿ ಕೇವಲ 40 ರೂಪಾಯಿ ಇತ್ತು’. ಇಂದಿಗೂ ಆ 40 ರೂಪಾಯಿಯನ್ನು ಫೋಟೋ ತೆಗೆದು ಫ್ರೇಂ ಹಾಕಿಸಿ ಇಟ್ಟುಕೊಂಡಿದ್ದೇನೆ ಎಂದು ದುನಿಯಾ ವಿಜಯ್​ ಹೇಳಿದ್ದರು. ಸದ್ಯ ದುನಿಯಾ ವಿಜಯ್ ಟಾಲಿವುಡ್‌ನಲ್ಲಿ (Tollywood) ಬ್ಯುಸಿಯಾಗಿದ್ದು, ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ಹೊಸ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಶೀರ್ಷಿಕೆ ಇಟ್ಟಿಲ್ಲ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೋಪಿಚಂದ್​ ಮಲಿನೇನಿ (Gopichand Malineni) ಆ್ಯಕ್ಷನ್​-ಕಟ್​ ಹೇಳಿದ್ದಾರೆ. 

WhatsApp
Facebook
Telegram
error: Content is protected !!
Scroll to Top