ಉತ್ತರಕನ್ನಡ(ಸಿದ್ದಾಪುರ): ಮನೆಯ ಅಂಗಳದಲ್ಲಿ ಒಣಗಿಸಿ ಚೀಲದಲ್ಲಿ ತುಂಬಿಟ್ಟಿದ್ದ ಅಡಿಕೆಯನ್ನು ಯಾರೋ ಕಳ್ಳರು ಕದ್ದುಕೊಂಡು ಹೋಗಿರುವ ಘಟನೆ ತಾಲೂಕಿನ ಅಳಗೊಡ್ ನಲ್ಲಿ ನಡೆದಿದೆ.
ತಮ್ಮ ತೋಟದಲ್ಲಿ ಬೆಳೆದ ಅಡಿಕೆಯನ್ನು ಅಂಗಳದಲ್ಲಿ ಒಣಗಿಸಿ 20 ಚೀಲದಲ್ಲಿ ತುಂಬಿಟ್ಟಿದ್ದ ಸಿಪ್ಪೆ ಗೋಟು ಅಡಿಕೆಯನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಕದ್ದುಕೊಂಡು ಹೋಗಿದ್ದು ಕಳ್ಳರನ್ನು ಪತ್ತೆಹಚ್ಚಿ ಕೊಡುವಂತೆ ಶಿವಾನಂದ್ ಕಾಳ ನಾಯ್ಕ್ ಅಳಗೋಡು ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆಸುಮಾರು ಹತ್ತು ಸಾವಿರ ಮೌಲ್ಯದ 40 ಕೆ ಜಿ ಅಡಿಕೆಯನ್ನು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.