ಭಟ್ಕಳ ಜೈನ ಸಮುಧಾಯದವರ ವತಿಯಿಂದ ತಾಲೂಕ ತಹಶಿಲ್ದಾರ್‌ ಮತ್ತು ಡಿ ವೈ ಎಸ್‌ ಪಿಗೆ ಮನವಿ: ಜೈನ ಸಮೂದಾಯದ ವಿರುದ್ದ ಅಶ್ಲೀಲ ಪದ ಬಳಕೆ ಮಾಡಿದ ಅಯೂಬ್‌ ಖಾನ್‌ ವಿರುದ್ದ ಮನವಿ

ಭಟ್ಕಳ ನ್ಯೂ ಕಾಂಗ್ರೇಸ್‌ ಪಕ್ಷದ ಕಾರ್ಯಾಧ್ಯಕ್ಷ, ಮೈಸೂರಿನ ಅಯೂಬ್‌ ಖಾನ್‌ ಜೈನ ಧರ್ಮಿಯರ ಬಗ್ಗೆ, ವಿಜಯಾ ಟಿವಿ ಚಾನಲಿನಲ್ಲಿ ಅಶ್ಲೀಲವಾಗಿ ಮಾತನಾಡಿರುವ ವಿರುದ್ದ, ಭಟ್ಕಳ ತಾಲೂಕ ಪದ್ಮಾವತಿ ಜ್ವಾಲಾಮಾಲಿನಿ ಚಂದ್ರನಾಥ ಸ್ವಾಮಿ ಟ್ರಷ್ಟ ವತಿಯಿಂದ ಜೈನ ಸಮುದಾಯದವರು, ತಾಲೂಕಿನ ಡಿ ವೈ ಎಸ್‌ ಪಿ ಬೆಳ್ಳಿಯಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದರು .

ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದದ ಸಂಬಂದ, ವಿಜಯಾ ಟಿವಿ ಚಾನಲಿನಲ್ಲಿ ನ್ಯೂ ಕಾಂಗ್ರೇಸ್‌ ಪಕ್ಷದ ಕಾರ್ಯಾಧ್ಯಕ್ಷ ಮೈಸೂರಿನ ಅಯೂಬ್‌ ಖಾನ್‌ ಜೈನ ಧರ್ಮಕ್ಕೆ ಸಂಬಂದ ಪಟ್ಟಂತೆ, ನೀವು ಬೆಟ್ಟದಲ್ಲಿ ಗೊಮ್ಮಟೇಶ್ವರನನ್ನು ನಿಲ್ಲಿಸಿದ್ದಿರಿ ಮೊದಲು ಗೊಮ್ಮಟೆಶ್ವರನಿಗೆ ಚೆಡ್ಡಿ ಹಾಕಿಸಿ ನಿಮಗೆನಾದರು ದೇಶದ ಬಗ್ಗೆ ಅನುಕಂಪ ಇದ್ದರೆ ಅಶ್ಲೀಲವಾಗಿ ನಿಂತಿರುವ ಗೊಮಟೇಶ್ವರನಿಗೆ ಚೆಡ್ಡಿ ಹಾಕಿಸಿ ಎಂದು ಹಲವಾರು ಬಾರಿ ಚರ್ಚೆಯಲ್ಲಿ ಮಾತನಾಡಿರುತ್ತಾನೆ. ಈ ರೀತಿಯಾಗಿ ಜೈನ ಧರ್ಮಿಯರಿಗೆ ಮತ್ತು ಅವರು ಆರಾಧಿಸುವ ಬಾಹುಬಲಿ ಸ್ವಾಮಿಗೆ ಅವಹೇಳನಕಾರಿಯಾಗಿ ನಿಂದಿಸಿ ಜೈನ ಧರ್ಮಿಯರಿಗೆ ನೋವುಂಟು ಮಾಡಿರುತ್ತಾರೆ. ,ಇವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗು ಬಿಗ್‌ ಬಾಸ್‌ ಖ್ಯಾತಿಯ ಪ್ರಥಮ ಹಾಗು ಪಬ್ಲಿಕ್‌ ಟಿ.ವಿಯ ಅರುಣ ಬಡಿಗೇರ್‌ ಕೂಡ ಸಾಮಾಜಿ ಜಾಲ ತಾಣಗಳಲ್ಲಿ ಜೈನ ಧರ್ಮಿಯರ ಧಾರ್ಮಿಕ ನಂಬಿಕೆ ದೇವರುಗಳ ಮೇಲೆ ಅಶ್ಲೀಲವಾಗಿ ಮಾತನಾಡಿದ್ದು, ಇವರ ವಿರುದ್ದವು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯನ್ನು ಸಲ್ಲಿಸಿದರು.

ಈ ಸಂದರ್ಬದಲ್ಲಿ ಸಂಘಟನೆಯ ಅಧ್ಯಕ್ಷರು ಪಧಾಧಿಕಾರಿಗಳು ಸದಸ್ಯರು ಹಾಗು ಸಮಸ್ಥ ಜೈನ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top