ಗಂಡಸ್ತನ ಇದೆಯಾ ಎಂದು ಪ್ರಶ್ನೀಸುವುದು BJPಯ ಸಂಸ್ಕೃತಿಯಾ? DK Suresh ಆಕ್ರೋಶದ ಪ್ರಶ್ನೆ

ಮುಖ್ಯಮಂತ್ರಿಗಳೇ ಸಚಿವರಿಗೆ ಬಾಷಣ ಮಾಡಿದ್ದು ಸಾಕು ಎಂದು ಸೂಚನೆ ಮಾಡಿದ್ರು. ಆದರೂ ಅವರು ನಿಲ್ಲಿಸಲಿಲ್ಲ. ಇದು ರಾಜ್ಯದ ಜನಕ್ಕೆ ಅವಮಾನ ಬರುವ ರೀತಿಯ ವರ್ತನೆ. ಒಬ್ಬ  ಮಂತ್ರಿ ಅನವಶ್ಯಕವಾಗಿ ಸಭೆಯನ್ನು ಹೊರತು ಪಡಿಸಿ ಮಾತಾಡಿದ್ರು

ಸೋಮವಾರ ರಾಮನಗರದಲ್ಲಿ ಸಚಿವ ಅಶ್ವತ್ಥ ನಾರಾಯಣ್ ((Minister Ashwath Narayan)  ಮತ್ತು ಸಂಸದ ಡಿ.ಕೆ.ಸುರೇಶ್ (MP DK Suresh) ಅವರ ನಡುವಿನ ವಾಕ್ಸಮರ ಇಂದು ಸಹ ಮುಂದುವರಿದಿದೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿಯ (BJP) ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿಗಳ ಮುಂದೆ ಸಚಿವರ ನಡವಳಿಕೆ ಮಾಡಿದ್ದನ್ನು ಸಮರ್ಥನೆ ಮಾಡಿಕೊಳ್ತಿದಾರೆ. ಮುಖ್ಯಮಂತ್ರಿಗಳೇ ಸಚಿವರಿಗೆ ಬಾಷಣ ಮಾಡಿದ್ದು ಸಾಕು ಎಂದು ಸೂಚನೆ ಮಾಡಿದ್ರು. ಆದರೂ ಅವರು ನಿಲ್ಲಿಸಲಿಲ್ಲ. ಇದು ರಾಜ್ಯದ ಜನಕ್ಕೆ ಅವಮಾನ ಬರುವ ರೀತಿಯ ವರ್ತನೆ. ಒಬ್ಬ  ಮಂತ್ರಿ ಅನವಶ್ಯಕವಾಗಿ ಸಭೆಯನ್ನು ಹೊರತು ಪಡಿಸಿ ಮಾತಾಡಿದ್ರು. ನಾವು ಬಿಜೆಪಿಯವರು, ನಾವು ಆಡೋದೇ ಹಿಂಗೆ, ಗಂಡಸಿದ್ರೆ ಬನ್ನಿ ಅಂತಾ ಮಾತಾಡ್ತಾರೆ. ಇದು ನನಗೆ ಮಾಡಿದ ಅಪಮಾನ ಅಲ್ಲ. ರಾಮನಗರ ಜನಕ್ಕೆ (Ramanagara) ಮಾಡಿದ ಅಪಮಾನ, ನಾಡಪ್ರಭು ಕೆಂಪೇಗೌಡರಿಗೆ (Nadaprabhu Kempe gowda) ಮಾಡಿದ ಅವಮಾನ ಎಂದು ಸಚಿವ ಅಶ್ವತ್ಥ ನಾರಾಯಣ್ (Minister Ashwath Narayan) ಅವರ ಹೇಳಿಕೆಯನ್ನು ಸಂಸದ ಡಿ.ಕೆ.ಸುರೇಶ್ (MP DK Suresh) ಖಂಡಿಸಿದರು.

ಸರ್ಕಾರದ ಕಾರ್ಯಕ್ರಮದಲ್ಲಿ ಇಂತಾ ಮಾತುಗಳು ಸರಿಯೇ ಎಂದು ಬಿಜೆಪಿ ಅವರ ರಾಜ್ಯದ ಅಧ್ಯಕ್ಷರಿಗೆ ನಾನು ಕೇಳಲು ಬಯಸುತ್ತೇನೆ. ಒಬ್ಬ ಸಿಎಂ ಮುಂದೆ, ಆ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಮುಂದೆ ಅವರು ಮಾಡಿದ್ದು ಸರಿಯೇ ಎಂದು ಡಿ.ಕೆ.ಸುರೇಶ್ ಪ್ರಶ್ನೆ ಮಾಡಿದರು.

WhatsApp
Facebook
Telegram
error: Content is protected !!
Scroll to Top