ಕೊರೊನಾ ಮೂರನೇ ಅಲೆ ರಾಜ್ಯಕ್ಕೆ ಪ್ರವೇಶಿಸಿರುವುದು ನಿಶ್ಚಿತ ಎನ್ನುವಂತೆ, ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಓಮ್ರಿಕಾನ್ ಪ್ರಕರಣಗಳು ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಜನವರಿ ಮೂರರ ವರದಿಯಂತೆ 77ಕ್ಕೆ ಏರಿಕೆಯಾಗಿದೆ. ಸತತವಾಗಿ ಬೆಂಗಳೂರಿನಲ್ಲಿ ದಿನವೊಂದರ ಪ್ರಕರಣ ಸಾವಿರದ ಗಡಿ ದಾಟುತ್ತಿದೆ.
ಸರಕಾರದ ಮುಂದೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ ಎಂದು ಸಚಿವರುಗಳು ಆದಿಯಾಗಿ ಅಧಿಕಾರಿಗಳು ಹೇಳುತ್ತಿದ್ದರೂ, ಸರಕಾರ ಅಂತಿಮ ಅಸ್ತ್ರ ಅದೇ ಆಗಲಿದೆ ಎನ್ನುವುದು ನಿಶ್ಚಿತ. ಈ ನಡುವೆ, ಕೋವಿಡ್ ಮುಂಜಾಗೃತ ಸಂಬಂಧ ಕರೆಯಲಾಗಿರುವ ಸಭೆ ಇಂದೇ (ಜ 4) ನಡೆಯಲಿದೆ. ಜನವರಿ ಐದಕ್ಕೆ ಸರಕಾರದ ಮುಂದಿನ ಕ್ರಮ ಏನು ಎನ್ನುವುದು ಅಂತಿಮವಾಗಲಿದೆ.